More

    ದೇಶದ ಉನ್ನತಿಗೆ ಬಾಬೂಜಿ ಕೊಡುಗೆ ಅಪಾರ

    ಮೊಳಕಾಲ್ಮೂರು: ಜಗಜೀವನ್ ರಾಮ್ ಅವರು ದೇಶದ ಉನ್ನತಿಗೆ ನೀಡಿದ ಕೊಡುಗೆ ಮಹತ್ತರವಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಟಿ.ಪ್ರೇಮನಾಥ್ ಶ್ಲಾಘಿಸಿದರು.

    ತಾಲೂಕು ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜಗಜೀವನ್ ರಾಮ್ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

    ಶೋಷಿತರು, ದೀನ ದಲಿತರ ಪ್ರಗತಿಗೆ ಶ್ರಮಿಸಿದವರಲ್ಲಿ ಬಾಬೂಜಿ ಮೊದಲಿಗರಾಗಿದ್ದಾರೆ. ಕೃಷಿ ವಲಯಕ್ಕೆ ಉತ್ತೇಜನ ನೀಡಿ ಆಹರ ಉತ್ಪಾದನೆ ಕೊರತೆ ನೀಗಿಸಿದ ಮಹಾತ್ಮರಿವರು ಎಂದು ಬಣ್ಣಿಸಿದರು.

    ಕಂದಾಯ ಅಧಿಕಾರಿ ಉಮೇಶ್, ನಿಲಯ ಪಾಲಕರಾದ ಹಾಲೇಶ್, ಗುರುಸಿದ್ದಪ್ಪ, ಶಿಕ್ಷಕರಾದ ಓಬಣ್ಣ, ಕೆ.ಎಚ್.ಸಣ್ಣಯಲ್ಲಪ್ಪ, ಸಿಬ್ಬಂದಿ ರಂಗನಾಥ್, ಓಬನಾಯಕ, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts