More

    ಟ್ಯಾಂಕ್ ತೆರವಿಗೆ ಮುನ್ನ ಪರ್ಯಾಯ ವ್ಯವಸ್ಥೆ ಮಾಡಿ

    ಮೊಳಕಾಲ್ಮೂರು: ಪರ್ಯಾಯ ವ್ಯವಸ್ಥೆ ಮಾಡದೇ ತಾಲೂಕಿನ ರಾಂಪುರದ ಭೋವಿ ಕಾಲನಿಯ ಕುಡಿವ ನೀರಿನ ಟ್ಯಾಂಕ್ ತೆರವುಗೊಳಿಸಬಾರದೆಂದು ಸ್ಥಳೀಯ ಮಹಿಳೆಯರು ಮಂಗಳವಾರ ಕಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

    ರಾಂಪುರದ 8-9ನೇ ವಾರ್ಡ್‌ನಲ್ಲಿ 400 ಕ್ಕೂ ಹೆಚ್ಚು ಕುಟುಂಬಗಳಿವೆ. ಇವರಿಗೆ ಕುಡಿಯಲು ಆಧಾರವಾಗಿರುವ ನೀರಿಗೆ ಟ್ಯಾಂಕನ್ನು ಹೆದ್ದಾರಿ ವಿಸ್ತರಣೆಗೆ ತೆರವುಗೊಳಿಸುವ ಕ್ರಮ ಸರಿಯಲ್ಲ. ಪರ್ಯಾಯ ವ್ಯವಸ್ಥೆ ಮಾಡಿ ತೆರವಿಗೆ ಮುಂದಾಗಬೇಕೆಂದು ಆಗ್ರಹಿಸಿ ಗ್ರಾಪಂ ಆಡಳಿತಕ್ಕೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಂ. ಬಸವರಾಜ್, ಪರ್ಯಾಯ ವ್ಯವಸ್ಥೆ ಮಾಡಿಯೇ ನೀರಿನ ಟ್ಯಾಂಕ್ ತೆರವುಗೊಳಿಸಬೇಕೆಂದು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

    ವಕೀಲ ಆರ್.ಎಂ. ಅಶೋಕ್, ಗ್ರಾಪಂ ಮಾಜಿ ಸದಸ್ಯ ಡಿ.ಸಿ.ನಾಗರಾಜ್, ಸ್ಥಳೀಯರಾದ ಭಾಗ್ಯಮ್ಮ, ವನಜಾಕ್ಷ್ಮಿ, ಲಕ್ಷ್ಮೀದೇವಿ, ಮಂಜುಳಾ, ಪ್ರಕಾಶ್, ಲೋಕೇಶ, ಪರಮೇಶ್ವರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts