More

    ಮೋಹನ್ ಕುಮಾರ್ ಬಿಕ್ಕೋಡು ಕೃಷಿ ಪತ್ತಿನ ಸಂಘದ ಅಧ್ಯಕ್ಷ

    ಬೇಲೂರು: ತಾಲೂಕಿನ ಬಿಕ್ಕೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆ.ಸಿ.ಮೋಹನ್ ಕುಮಾರ್ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದರು.

    ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಜೆ.ಸಿ.ಮೋಹನ್ ಕುಮಾರ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶಕ್ಕು ಅವಿರೊಧ ಆಯ್ಕೆ ಘೋಷಿಸಿದರು.

    ನೂತನ ಅಧ್ಯಕ್ಷ ಜೆ.ಸಿ.ಮೋಹನ್ ಕುಮಾರ್ ಮಾತನಾಡಿ, ಸಹಕಾರ ಸಂಘ ರೈತರ ಜೀವನಾಡಿ. ರೈತರ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಕಳೆದ ಅವಧಿಯಲ್ಲಿ ಸಾಲ ಪಡೆದವರಲ್ಲಿ ಸಾಲ ಮನ್ನಾವಾಗದೆ ಬಾಕಿ ಇರುವ 9 ಜನರ 7.25 ಲಕ್ಷ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಕೋರಲಾಗಿದೆ. ಅಲ್ಲದೆ ಷೇರುದಾರರಿಂದ ಹೆಚ್ಚುವರಿ ಸಾಲಕ್ಕೆ ಬೇಡಿಕೆ ಬರುತ್ತಿದ್ದು 3 ಕೋಟಿ ರೂ.ಸಾಲ ನೀಡುವಂತೆ ಎಚ್‌ಡಿಸಿಸಿ ಬ್ಯಾಂಕಿಗೆ ಮನವಿ ಮಾಡಿದ್ದು, ಬಿಡುಗಡೆಯಾದ ಸಾಲ ಸೌಲಭ್ಯವನ್ನು ಮುಂಗಾರು ಅವಧಿಯೊಳಗೆ ರೈತರಿಗೆ ನೀಡಲಾಗುವುದು ಎಂದರು.

    ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ನಟರಾಜು, ಬಿಕ್ಕೋಡು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧನಂಜಯ, ಗ್ರಾಪಂ ಅಧ್ಯಕ್ಷ ಮೋಹನ್ ರಾಜು, ಸದಸ್ಯರಾದ ಹೇಮಚಂದ್ರ, ಪರಮೇಶ್, ಭಾನುಪ್ರಕಾಶ್, ಚಂದ್ರಶೇಖರ್, ಚೇತನ್ ಕುಮಾರ್, ಕಾಳರಾಜು, ನಿಂಗೇಗೌಡ, ಪದ್ಮಾವತಿ, ಉಮಾ, ರಾಧಾ, ಮುಖಂಡರಾದ ಶಿವಶಂಕರ್, ಕಾಂತರಾಜು, ದೊಡ್ಡಪ್ಪ, ಶೇಷೆಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts