More

    ಶಾಸಕ ಸಿದ್ದು ಸವದಿ ಪರ ಸಂಸದ ನಯಾಬ್​ಸಿಂಗ್ ಸೈನಿ ಮತಯಾಚನೆ

    ರಬಕವಿ/ಬನಹಟ್ಟಿ: ತೇರದಾಳ ವಿಧಾನಸಭೆ ಕ್ಷೇತ್ರದ ಆಯಾ ವಾರ್ಡ್​ಗಳಲ್ಲಿ ಬಿಜೆಪಿ ಬಿರುಸಿನ ಪ್ರಚಾರ ನಡೆಸುತ್ತಿದ್ದರೆ, ಬನಹಟ್ಟಿಯ ಸಂತೆಯೊಳಗೆ ಹರಿಯಾಣದ ಕುರುಕ್ಷೇತ್ರದ ಸಂಸದ ನಯಾಬ್​ಸಿಂಗ್ ಸೈನಿ ಸಿದ್ದು ಪರ ಮತಯಾಚನೆ ನಡೆಸಿದರು. ಬಿಜೆಪಿ ಅಭ್ಯರ್ಥಿ, ಶಾಸಕ ಸಿದ್ದು ಸವದಿ ಪರ ಕರಪತ್ರ ಹಂಚಿ ಮಾರುಕಟ್ಟೆಯಲ್ಲಿದ್ದ ಜನತೆಗೆ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.

    ಇವರೊಂದಿಗೆ ಗೋವಿಂದ ಡಾಗಾ, ಬಸವರಾಜ ಐವಳ್ಳಿ, ಶಿವಾನಂದ ಬುದ್ನಿ, ಪ್ರಭಾಕರ ಮೊಳೇದ, ದುಂಡಪ್ಪ ಮಾಚಕನೂರ ಸಾಥ್ ನೀಡಿದರು.

    ಇದನ್ನೂ ಓದಿ :ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನ ತಿರಸ್ಕರಿಸುವರು

    ತೇರದಾಳ ಕ್ಷೇತ್ರದ ಶಾಸಕರಾಗಿ ಕಳೆದ ಬಾರಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ, ನೇಕಾರ ಸಮುದಾಯಕ್ಕೆ ಐತಿಹಾಸಿಕ ಕಾರ್ಯಗಳನ್ನು ಒದಗಿಸಿದ್ದಾರೆ. ರೈತ ಹಾಗೂ ನೇಕಾರ ಸಮುದಾಯಕ್ಕೆ ಮತ್ತಷ್ಟು ಯೋಜನೆಗಳನ್ನು ಒದಗಿಸಲು ಬಿಜೆಪಿ ಆಡಳಿತಕ್ಕೆ ತನ್ನಿ ಎಂದು ಸಂಸದ ಸೈನಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts