ದಾವಣಗೆರೆ : ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಬೆನಕನಹಳ್ಳಿ-ಸಾಸುವೆಹಳ್ಳಿ ನೂತನ ಮಾರ್ಗದ ಕೆಎಸ್ಆರ್ಟಿಸಿ ಬಸ್ ಚಲಾಯಿಸಿ ಸಾರ್ವಜನಿಕರು ಹುಬ್ಬೇರುವಂತೆ ಮಾಡಿದರು.
ಚಾಲಕರ ಸಮವಸ್ತ್ರ ಧರಿಸಿದ ಶಾಸಕ ರೇಣುಕಾಚಾರ್ಯ ಅವರು, ಬೆನಕನಹಳ್ಳಿಯಿಂದ ಬಸ್ ಚಾಲನೆ ಆರಂಭಿಸಿದರು. ಶಾಸಕರ ಕಾರ್ಯವನ್ನು ಬೆಂಬಲಿಗರು ಶ್ಲಾಘಿಸಿದರು.
ಬೆನಕನಹಳ್ಳಿಯಿಂದ ಉಜನಿಪುರ, ಹಿರೇಬಸೂರು, ಹೊಟ್ಯಾಪುರ, ರಾಂಪುರ, ಬಳ್ಳಾಪುರ ಮಾರ್ಗವಾಗಿ ಬಸ್ ಸಾಸುವೆಹಳ್ಳಿ ತಲುಪುತ್ತದೆ. ಪ್ರತಿ ಗ್ರಾಮ ಬಂದಾಗಲೂ ಶಾಸಕರು ಗ್ರಾಮದ ಹೆಸರನ್ನು ಹೇಳುತ್ತಿದ್ದರು.
ಮಾರ್ಗದಲ್ಲಿ ಚಲಿಸುವಾಗ ಎದುರಾದ ಸೇತುವೆ ದಾಟುವ ವೇಳೆ ಎದೆ ಢವ, ಢವ ಎನ್ನುತ್ತಿತ್ತು ಎಂದು ತಮಾಷೆ ಮಾಡಿ ಪ್ರಯಾಣಿಕರನ್ನು ನಗೆಗಡಲಲ್ಲಿ ತೇಲಿಸಿದರು. (ದಿಗ್ವಿಜಯ ನ್ಯೂಸ್)