More

    ಶಾಸಕ ಗೋಪಾಲಕೃಷ್ಣ ಬೇಳೂರು ಕ್ಷಮೆ ಯಾಚಿಸಲಿ

    ಸಾಗರ: ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಮಹಾಸಭಾದ ತಾಲೂಕು ಶಾಖೆ ಅಧ್ಯಕ್ಷ ಶೇಖರಪ್ಪ ಬೇಸೂರು, ಶಾಸಕರು ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆಯಾಚಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ಶಾಮನೂರು ಶಿವಶಂಕರಪ್ಪ ಅವರು ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತದೆ ಎಂಬ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಸಮಾಜಕ್ಕಾಗಿರುವ ಅನ್ಯಾಯವನ್ನು ಅಭಿವ್ಯಕ್ತಗೊಳಿಸಿರುವ ಸಮಾಜದ ಹಿರಿಯ ನಾಯಕರ ವಿರುದ್ಧ ಬೇಳೂರು ಹಗುರವಾಗಿ ಮಾತನಾಡಿರುವುದನ್ನು ಸಮಾಜ ಸಹಿಸುವುದಿಲ್ಲ ಎಂದರು.
    ವೀರಶೈವ ವಧು-ವರರ ಕೇಂದ್ರದ ಅಧ್ಯಕ್ಷ ಎಸ್.ಸಿ.ಗಂಗಾಧರ ಗೌಡ, ಪ್ರಮುಖ ಕೆ.ವಿ.ಪ್ರವೀಣ್, ಕುಮಾರ್, ಕಾಂತೇಶ್, ಸಂಜಯ್, ಶಶಿ ಇದ್ದರು.

    ಶಾಮನೂರು ಶಿವಶಂಕರಪ್ಪ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಅವರ ಜತೆಯಲ್ಲಿ ನಾವು ಮಾತುಕತೆ ಮಾಡಿಕೊಳ್ಳುತ್ತೇವೆ. ಮಾನ್ಯ ಯಡಿಯೂರಪ್ಪನವರು ಈ ಬಗ್ಗೆ ಚಿಂತಿಸಬೇಕಾದ ಅಗತ್ಯತೆ ಇಲ್ಲ. ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಹೇಗೆ ಎಲ್ಲವೂ ನಡೆದಿತ್ತು ಎಂಬುದನ್ನು ಮಾತ್ರ ಹೇಳಿದ್ದೇನೆಯೇ ಹೊರತು ಯಾರ ಬಗ್ಗೆಯೂ ನಾನು ಅಗೌರವವಾಗಿ ಮಾತನಾಡಿಲ್ಲ.
    ಗೋಪಾಲಕೃಷ್ಣ ಬೇಳೂರು, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts