More

    ಶ್ರೀರಾಮ ಮಂದಿರದಲ್ಲಿ ಶಾಸಕ ಸಿ.ಸಿ. ಪಾಟೀಲ ಪೂಜೆ

    ನರಗುಂದ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಅಂಗವಾಗಿ ಪಟ್ಟಣದ ದಂಡಾಪೂರ ಬಡಾವಣೆಯ ಶ್ರೀರಾಮ ಮಂದಿರಕ್ಕೆ ಶಾಸಕ ಸಿ.ಸಿ. ಪಾಟೀಲ ಭೇಟಿ ನೀಡಿ ವಿವಿಧ ಧಾರ್ವಿುಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.

    ನವಗ್ರಹ ಹೋಮ, ಮಹಾಸಂಕಲ್ಪ, ಪುಣ್ಯಾಹವಾಚನ, ರಾಮತಾರಕ ಹೋಮ, ಪೂರ್ಣಾಹುತಿ, ದೀಪ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ರಾಮಭಟ್ಟ ಶ್ರೀಪಾದಭಟ್ಟ ಪುರೋಹಿತ ಅವರ ಸಾನ್ನಿಧ್ಯದಲ್ಲಿ ದೀಪಾರಾಧನೆ, ಅನ್ನಸಂತರ್ಪಣೆ ನೆರವೇರಿಸಲಾಯಿತು.

    ಪಟ್ಟಣದ ಶಂಕರಲಿಂಗ, ಶ್ರೀವೆಂಕಟೇಶ್ವರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ಹಮ್ಮಿಕೊಂಡಿದ್ದ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಜರುಗಿದವು. ಉಮೇಶಗೌಡ ಪಾಟೀಲ, ನಾಗರಾಜ ನೆಗಳೂರ, ಚಿದಂಬರ್ ಪೂಜಾರ, ಶ್ರೀಪಾದ ಹಂದಿಗೋಳ, ಅನಂತ ಪೂಜಾರ, ಶ್ರೀಪಾದ ದೇಶಪಾಂಡೆ, ಶ್ರೀಕಾಂತ ದೇಶಪಾಂಡೆ, ದತ್ತಾತ್ರೆಯ ದೇಶಪಾಂಡೆ, ಚೇತನ್ ನಾಯಕ್, ವೆಂಕಟೇಶ ಕುಲಕರ್ಣಿ, ಗುಂಡೂರಾವ್ ಸೊಂಡೂರ, ಗುರುರಾಜ ಸಬನಿಸ್, ನವೀನ ಸೊಂಡೂರ, ಚೇತನ ಕುಲಕರ್ಣಿ, ನಾಗೇಶ ಜೋಶಿ, ಉಮೇಶ ಯಳ್ಳೂರ, ಕುಮಾರ ಬೆಳವಟಗಿ, ಶಂಕರ ಪಲ್ಟನಕರ್, ಪಂಚಣ್ಣ ಬೆಳವಟಗಿ ಇದ್ದರು.

    ನೃತ್ಯ ಪ್ರದರ್ಶನ: ಐತಿಹಾಸಿಕ ಶ್ರೀವೆಂಕಟೇಶ್ವರ ದೇವಾಲಯದ ಆವರಣದಲ್ಲಿ ರಾಷ್ಟ್ರದೇವಿಕಾ ಸಮಿತಿಯ ಸುಮಂಗಲೆಯರಿಂದ ಸಾಮೂಹಿಕ ದಾಂಡಿಯಾ ನೃತ್ಯ ಪ್ರದರ್ಶನ ಜರುಗಿತು. ಸುಕನ್ಯಾ ಸಾಲಿ, ನಾಗರತ್ನಾ ಜಾಧವ, ಮಂಗಳಾ ಪಾಟೀಲ, ರೇಖಾ ನಲವಡೆ, ರತ್ನಾ ಗುಡದನ್ನ ವರ, ಜ್ಯೋತಿ ಪೂಜಾರ, ರತ್ನಾ ಪೂಜಾರ, ದೀಪಿಕಾ ಸುಬೇದಾರ, ಕಲ್ಪನಾ ಕುಲಕರ್ಣಿ, ದಿವ್ಯಾ ಜ್ಯೋತಿ, ಜಯಶ್ರೀದೇವಿ ಸಂಪಗಾಂವ, ಸುಲೋಚನಾ ಪುಥಲೇಕರ್, ದಿವ್ಯಾ ಕೊಣ್ಣೂರ ಇದ್ದರು.

    ವಿಶೇಷ ಪೂಜೆ: ಸರ್ವಜ್ಞ ವರ್ತಲದಲ್ಲಿ ಸರ್ವಜ್ಞ ಯುವಕ ಮಂಡಳದ ಸದಸ್ಯರು ಶ್ರೀರಾಮನ ಭಾವಚಿತ್ರಕ್ಕೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ, ಅಜಯ ಮೋರೆ, ಗೋವಿಂದಪ್ಪ ನೀರಲ ಕೇರಿ, ಮಂಜು ಕೆಂದೂರ, ಕೃಷ್ಣಾ ಸಾಬಳೆ, ಕಿರಣ ಸುಬೇದಾರ, ಬಸವರಾಜ ಸಾಬಳೆ, ಶಶಿಧರ ಸುಬೇದಾರ, ಮಹೇಶ ಬಾಲೆಹೋಸೂರ, ಮಹಾದೇವಪ್ಪ ಬಾರಕೇರ, ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts