ನವದೆಹಲಿ: 2018ರಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿದ್ದ ಮಾಜಿ ಸ್ಪಿನ್ನರ್ ರಮೇಶ್ ಪವಾರ್, ಏಕದಿನ ತಂಡದ ನಾಯಕಿ ಹಾಗೂ ಅನುಭವಿ ಬ್ಯಾಟುಗಾತಿರ್ ಮಿಥಾಲಿ ರಾಜ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಹುದ್ದೆ ಕಳೆದುಕೊಂಡಿದ್ದರು. ಇದೀಗ ಮಿಥಾಲಿ ರಾಜ್ ಏಕದಿನ ತಂಡದ ನಾಯಕಿಯಾಗಿ ಮುಂದುವರಿದಿರುವ ನಡುವೆಯೂ ರಮೇಶ್ ಪವಾರ್ ಇತ್ತೀಚೆಗೆ ಕೋಚ್ ಆಗಿ ಮರುನೇಮಕಗೊಂಡಿದ್ದಾರೆ. ಈಗ ಮತ್ತೆ ರಮೇಶ್ ಪವಾರ್ ಜತೆಗೆ ಕಾರ್ಯನಿರ್ವಹಿಸುವ ಬಗ್ಗೆ ಮಿಥಾಲಿ ರಾಜ್ ಏನಂತಾರೆ ಗೊತ್ತೇ?
2022ರ ಮಹಿಳೆಯರ ಏಕದಿನ ವಿಶ್ವಕಪ್ಗೆ ಬಲಿಷ್ಠ ತಂಡವನ್ನು ಕಟ್ಟುವ ಹೊಣೆ ಇದೀಗ ಮಿಥಾಲಿ ರಾಜ್ ಮತ್ತು ರಮೇಶ್ ಪವಾರ್ ಇಬ್ಬರ ಮೇಲೆಯೂ ಇದೆ. ಹೀಗಾಗಿ ಇಬ್ಬರೂ ಈಗ ಮತ್ತೆ ಜತೆಯಾಗಿ ಕಾರ್ಯನಿರ್ವಹಿಸಬೇಕಾಗಿದ್ದು, ಹಿಂದಿನ ವಿವಾದಗಳನ್ನು ಮರೆತು ಕೆಲಸ ಮಾಡಬೇಕಾಗಿದೆ. ಆಗಿದ್ದೆಲ್ಲ ಆಗಿ ಹೋಯಿತು. ನಾವು ಮತ್ತೆ ಹಿಂದಕ್ಕೆ ಹೋಗಲಾರೆವು. ರಮೇಶ್ ಪವಾರ್ ಹೊಸ ಯೋಜನೆಗಳೊಂದಿಗೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಾವಿಬ್ಬರೂ ಜತೆಯಾಗಿ ಹಡಗನ್ನು ಮುನ್ನಡೆಸಲಿದ್ದೇವೆ ಎಂದು ಮಿಥಾಲಿ ರಾಜ್ ಇದೀಗ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: VIDEO | ಆರು ವರ್ಷದ ಬಾಲಕಿಯ ಬ್ಯಾಟಿಂಗ್ ವಿಡಿಯೋ ವೈರಲ್
ಮುಂದಿನ ವರ್ಷ ವಿಶ್ವಕಪ್ ನಡೆಯಲಿರುವುದರಿಂದ ನಾವಿಬ್ಬರೂ ಜತೆಯಾಗಿ ಇದೀಗ ಬಲಿಷ್ಠ ತಂಡವನ್ನು ಕಟ್ಟಬೇಕಾಗಿದೆ ಎಂದು ಮಿಥಾಲಿ ಹೇಳಿದ್ದಾರೆ. 2018ರಲ್ಲಿ ಟಿ20 ವಿಶ್ವಕಪ್ನ ಉಪಾಂತ್ಯ ಪಂದ್ಯದ ವೇಳೆ ಮಿಥಾಲಿ ರಾಜ್ ಅವರನ್ನು ರಮೇಶ್ ಪವಾರ್ ಆಡುವ ಬಳಗದಿಂದ ಹೊರಗಿಟ್ಟಿದ್ದರು. ಇದರಿಂದ ಸಿಟ್ಟಾಗಿದ್ದ ಮಿಥಾಲಿ, ರಮೇಶ್ ಪವಾರ್ ತಂಡದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿ ಬಿಸಿಸಿಐಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಪವಾರ್ ಅವರನ್ನು ಬಿಸಿಸಿಐ ವಜಾಗೊಳಿಸಿತ್ತು.
ಪತ್ನಿಯ ಬ್ಲರ್ ಚಿತ್ರಕ್ಕೆ ಟ್ರೋಲ್, ಇರ್ಫಾನ್ ಪಠಾಣ್ ನೀಡಿದ ಉತ್ತರವೇನು ಗೊತ್ತೇ?
ವಿಶ್ವ ಟೆಸ್ಟ್ ಫೈನಲ್ಗೆ 6ನೇ ದಿನ? ಫಲಿತಾಂಶ ಬರದಿದ್ದರೆ ಹೆಚ್ಚುವರಿ ದಿನ ಆಟವಾಡಿಸಲು ಚಿಂತನೆ