More

    ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿದ್ದ ಯುವಕ ನಾಪತ್ತೆ; 3 ದಿನಗಳ ಬಳಿಕ ಗ್ರಾಮದ ನೀರಿನ ಕಟ್ಟೆಯಲ್ಲೇ ಶವ ಪತ್ತೆ!

    ದೇವನಹಳ್ಳಿ: ಹಬ್ಬದ ದಿನ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ತೆರಳಿ ನಾಪತ್ತೆ ಆಗಿದ್ದ ಯುವಕನೊಬ್ಬನ ಶವ ಮೂರು ದಿನಗಳ ಬಳಿಕ ಗ್ರಾಮದ ನೀರಿನ ಕಟ್ಟೆಯಲ್ಲೇ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ.

    ನಾಪತ್ತೆಯಾಗಿದ್ದ ಯುವಕನ ಶವ ದೊಡ್ಡಬಳ್ಳಾಪುರ ತಾಲೂಕಿನ ಸೂಲುಕುಂಟೆಯಲ್ಲಿನ ನೀರಿನ ಕಟ್ಟೆಯಲ್ಲಿ ಇಂದು ಪತ್ತೆಯಾಗಿದೆ. 23 ವರ್ಷದ ಆನಂದ್ ಎಂಬಾತ ನಾಪತ್ತೆಯಾಗಿ ಮೃತಪಟ್ಟಿರುವ ಯುವಕ. ಸೂಲುಕುಂಟೆ ನಿವಾಸಿಯಾದ ಈತನ ತಾಯಿ ಹಬ್ಬದ ದಿನ ಮಗಳ ಮನೆಗೆ ತೆರಳಿದ್ದರು. ಈತ ಬೆಂಗಳೂರಿನಲ್ಲಿರುವ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ತೆರಳಿದ್ದ. ಹಬ್ಬ ಮುಗಿಸಿ ಬಂದ ತಾಯಿ, ಮಗ ಎಲ್ಲಿಯೂ ಕಾಣದ್ದರಿಂದ ಹುಡುಕಾಡಿದಾಗ ನೀರಿನ ಕಟ್ಟೆಯಲ್ಲಿ ಆತನ ಶವ ಪತ್ತೆಯಾಗಿದೆ.

    ಈತ ಪ್ರೇಮವೈಫಲ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದರೂ ಇನ್ನೂ ನಿಖರವಾಗಿ ಏನೂ ತಿಳಿದುಬಂದಿಲ್ಲ. ಅಷ್ಟಕ್ಕೂ ಈತ ಬೆಂಗಳೂರಿಗೆ ಹೋಗಿದ್ದನೇ ಅಥವಾ ಅಂದೇ ಊರಲ್ಲೇ ಇದ್ದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದನೇ ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ದೊಡ್ಡಬೆಳವಂಗಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಹೊತ್ತಿ ಉರಿಯುತ್ತಿದೆ ಮತ್ತೊಂದು ಮನೆ: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಧಾರಾಕಾರ ಮಳೆ, ಇನ್ನೊಂದೆಡೆ ಧಗಧಗಿಸುವ ಬೆಂಕಿ..

    ಹನಿಟ್ರ್ಯಾಪ್​ ಗ್ಯಾಂಗ್ ಅರೆಸ್ಟ್​: ಮೈಮುಟ್ಟದೆ ಬಟ್ಟೆ ಬಿಚ್ಚಿಸುತ್ತಿದ್ದರು, ಫೀಮೇಲ್ ಹೆಸರಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು..

    ಕಠಾರಿಪಾಳ್ಯದಲ್ಲಿ ಕಠೋರ ಹೊಡೆದಾಟ, ಐವರಿಗೆ ಗಾಯ; ಜಿಲ್ಲಾಸ್ಪತ್ರೆಯ ವಾರ್ಡ್​ನೊಳಗೂ 2 ಗುಂಪುಗಳ ಮಾರಾಮಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts