More

    ಬಾವಿಯಲ್ಲಿ ಬಾಲಕಿ ಮೃತದೇಹ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಬಯಲಾಯ್ತು ಬಾಲಕಿಯ ಚಿಮ್ಮಕ್ಕನ ಕಿರಾತಕ ಕೃತ್ಯ!

    ಬಾಗಲಕೋಟೆ: ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಾಲಕಿಯ ಚಿಮ್ಮಕ್ಕನ ಕಿರಾತಕ ಕೃತ್ಯ ಬಯಲಾಗಿದೆ. ತನ್ನ ಅನೈತಿಕ ಸಂಬಂಧ ಮುಚ್ಚಿಡಲು ಪ್ರಿಯಕರನೊಂದಿಗೆ ಸೇರಿ ಬಾಲಕಿಯನ್ನು ಹತ್ಯೆ ಮಾಡಿರುವುದು ಗೊತ್ತಾಗಿದೆ.

    ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ರೇಖಾ ಸಂಗಪ್ಪ ಯಂಕಂಚಿ(11) ಎಂಬ ಬಾಲಕಿ ಮಾರ್ಚ್ 15 ಬೆಳಿಗ್ಗೆ ಸುಮಾರು 10 ಗಂಟೆಯಿಂದ ನಾಪತ್ತೆಯಾಗಿದ್ದಳು. ಬಳಿಕ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಬಾಲಕಿಯನ್ನು ಹತ್ಯೆಗೈದು, ಶವವನ್ನು ಚೀಲದಲ್ಲಿ ಹಾಕಿ ಬಾವಿಗೆ ಎಸೆದಿದ್ದರು. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಲೆ ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದು.

    ಇದೀಗ ಬಾಲಕಿಯ ಕೊಲೆ ರಹಸ್ಯವನ್ನು ಬೇಧಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಂಕ್ರವ್ವ(28) ಹಾಗೂ ಪ್ರಿಯಕರ ಷಣ್ಮುಖ(25) ಕೊಲೆ ಆರೋಪಿಗಳು. ಶವ ಸಾಗಿಲು ಹಗ್ಗ ಹಾಗೂ ಪ್ಲಾಸ್ಟಿಕ್ ಚೀಲ ತಂದು ಕೊಟ್ಟ ಶಂಕ್ರವ್ವನ ಸಹೋದರ ಶಂಕ್ರಪ್ಪ(20) ಸಹ ಆರೋಪಿ.

    ಶಂಕ್ರವ್ವ ಎರಡು ವರ್ಷಗಳಿಂದ ಟಂಟಂ ಚಾಲಕ ಷಣ್ಮುಖಪ್ಪನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಶಂಕ್ರವ್ವ ಕೊಲೆಯಾದ ಬಾಲಕಿ ರೇಖಾಳ ಚಿಕ್ಕಮ್ಮಳಾಗಿದ್ದು, ಗಂಡ ಮಾನಸಿಕ ಅಸ್ವಸ್ಥನಾಗಿದ್ದ. ಶಂಕ್ರವ್ವಳ ಮನೆಗೆ ಷಣ್ಮುಖಪ್ಪ ಆಗಾಗ ಬಂದು ಹೋಗಿ ಮಾಡುತ್ತಿದ್ದ. ಇದನ್ನು ಬಾಲಕಿ ರೇಖಾ ನೋಡಿದ್ದಾಳೆ. ತಮ್ಮ ಅನೈತಿಕ ಸಂಬಂಧ ಬೇರೆಯವರ ಮುಂದೆ ಹೇಳಬಹುದು ಎಂಬ ಭಯದಲ್ಲಿ ಶಂಕ್ರವ್ವ ಹಾಗೂ ಆಕೆಯ ಪ್ರಿಯಕರ ರೇಖಾಳನ್ನು ಹತ್ಯೆ ಮಾಡಲು ಮುಂದಾಗಿದ್ದಾರೆ.

    ಶಂಕ್ರವ್ವ ಹಾಗೂ ಷಣ್ಮುಖಪ್ಪ ಬಾಲಕಿ ರೇಖಾಳನ್ನು ಮನೆಗೆ ಕರೆಯಿಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬಾವಿಯಲ್ಲಿ ಎಸೆದಿದ್ದಾರೆ. ಬಳಿಕ ಏನೂ ನಡೆದೇ ಇಲ್ಲ ಎನ್ನುವಂತಿದ್ದ ಆರೋಪಿಗಳು, ತನಿಖೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts