More

    ಅಕ್ರಮದ ವಿರುದ್ಧ ಹೋರಾಡುತ್ತಿದ್ದ ರೈತ ನಾಪತ್ತೆ; ಬಳಿಕ ಶವವಾಗಿ ಪತ್ತೆ, ಬಳಿ ಇತ್ತು ವಿಷದ ಬಾಟಲಿ!

    ವಿಜಯನಗರ: ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದ ರೈತನೊಬ್ಬ ಕಾಣೆಯಾಗಿದ್ದು, ಬಳಿಕ ಶವವಾಗಿ ಪತ್ತೆಯಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೂವಿನಹಡಗಲಿಯ ರೈತ ಬಣಕಾರ ಮಲ್ಲಪ್ಪ ಸಾವಿಗೀಡಾದ ರೈತ.

    ರೈತ ಬಣಕಾರ ಮಲ್ಲಪ್ಪ ಕೆಲ ಕಾಲದಿಂದ ಅಕ್ರಮ ಲೇಔಟ್ ವಿರುದ್ಧ ಹೋರಾಟ ಮಾಡುತ್ತಿದ್ದ. ಬಳಿಕ ಕೆಲವು ದಿನಗಳಿಂದ ಕಾಣೆಯಾಗಿದ್ದು, ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಪಟ್ಟಣದ ಹೊರವಲಯದಲ್ಲಿ ಅವರ ಶವ ಪತ್ತೆಯಾಗಿದೆ. ಮಾತ್ರವಲ್ಲ, ಶವದ ಬಳಿ ವಿಷದ ಬಾಟಲಿ ಕೂಡ ಸಿಕ್ಕಿದೆ.

    ಸ್ಥಳಕ್ಕೆ ಹೂವಿನ ಹಡಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಇನ್ನಷ್ಟೇ ತನಿಖೆಯಿಂದ ಖಚಿತವಾಗಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

    Photo-Video | ಕೊನೆಯ ದಿನಗಳಲ್ಲಿ ಹೀಗಿದ್ದರು ಲತಾ ಮಂಗೇಶ್ಕರ್​..

    ಡಾ.ರಾಜಕುಮಾರ್ ಅವರ ಕಂಚಿನ ಪುತ್ಥಳಿ ಕಳವು; ಇಬ್ಬರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts