ಹಳ್ಳಿಯೊಂದರಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆಗೆಂದು ಇಡಲಾಗಿದ್ದ ಹಣ್ಣುಗಳನ್ನು ಕದ್ದು ತಿಂದರೆಂದು ಆರೋಪದಲ್ಲಿ ಇಬ್ಬರು ಬಾಲಕರನ್ನು ಮನಸೋಇಚ್ಛೆ ಥಳಿಸಲಾಗಿದೆ.
ಉತ್ತರಪ್ರದೇಶದ ಮಥುರಾ ಜಿಲ್ಲೆಯ ಮಂಥ್ ಬಳಿ ನಸೀತಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಗ್ರಾಮದ ಶಾಲೆ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಬಳಿಕ ಪ್ರಸಾದವಾಗಿ ನೀಡಲು ಹಣ್ಣುಗಳನ್ನು ಶಾಲೆಯ ಒಳಗೆ ಕೋಣೆಯಲ್ಲಿ ಇಡಲಾಗಿತ್ತು. ಗ್ರಾಮದ ಇಬ್ಬರು ಬಾಲಕರು ಕೋಣೆಗೆ ಅದನ್ನು ತೆಗೆದುಕೊಂಡು ಹೋಗಿ ತಿಂದಿದ್ದಾರೆ.
ಇದನ್ನೂ ಓದಿ; ಮಾಸ್ಕ್, ಸ್ಯಾನಿಟೈಸರ್ ನೀಡೋದಾಗಿ ಮನೆಗೆ ಬಂದ್ರು; 8 ವರ್ಷದ ಬಾಲಕನ ಅಪಹರಿಸಿ 4 ಕೋಟಿ ರೂ.ಗೆ ಬೇಡಿಕೆಯಿಟ್ರು
ಕಾರ್ಯಕ್ರಮ ಆಯೋಜಿಸಿದ್ದ ಯುವಕರಿಗೆ ಇದು ಗೊತ್ತಾಗುತ್ತಿದ್ದಂತೆ, ಇಬ್ಬರನ್ನೂ ಹಿಡಿದು ತಂದು ಶಾಲೆಯ ಬಳಿ ಕಟ್ಟಿ ಹಾಕಿದ್ದಾರೆ. ಮನ ಬಂದಂತೆ ಥಳಿಸಿದ್ದಾರೆ. ಸುತ್ತಲೂ ಜನ ನೋಡುತ್ತಿದ್ದರೂ ಯಾರೂ ರಕ್ಷನೆಗೆ ಮುಂದಾಗಿಲ್ಲ.
ಬಾಲಕನೊಬ್ಬನ ತಂದೆಗೆ ಈ ವಿಚಾರ ಗೊತ್ತಾಗಿ ಸ್ಥಳಕ್ಕೆ ತೆರಳಿದ್ದಾರೆ. ಮಗನ ಆವಸ್ಥೆ ಕಂಡು ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿದ್ದಾರೆ. ಮಕ್ಕಳನ್ನು ಬಿಡಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಜನರು ಗಲಾಟೆ ಮಾಡಿದ ಬಳಿಕ ಥಳಿಸಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.