ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರ ಪಾಲಿಗೆ ಇಂದು ಅವಿಸ್ಮರಣೀಯ ದಿನ. ಏಕೆಂದರೆ ಸಚಿವರ ಮುದ್ದಿನ ಏಂಜಲ್ಸ್ ಅವರಿಗಾಗಿಯೇ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಇದು ಅವರ ಜೀವನದಲ್ಲೇ ಮಧುರ ಕ್ಷಣವಂತೆ. ಈ ಬಗ್ಗೆ ಸ್ವತಃ ಸುಧಾಕರ್ ಅವರೇ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಈ ಉಡುಗೊರೆ ಕೊಟ್ಟಿದ್ದು ಅವರ ಮುದ್ದಿನ ಮಗಳು. ಇಂದು ಸುಧಾಕರ್ ಜನ್ಮದಿನ. ಕರೊನಾತಂಕದ ಛಾಯೆ ಇಲ್ಲವಾಗಿದ್ದರೆ ಹುಟ್ಟುಹಬ್ಬದ ಸಂಭ್ರಮ ಸ್ವಗೃಹ ಸೇರಿದಂತೆ ಕ್ಷೇತ್ರದೆಲ್ಲೆಡೆ ಕಳೆಗಟ್ಟುತ್ತಿತ್ತು. ಆದರೆ, ಸಚಿವರ ತಂದೆ, ಪತ್ನಿ ಮತ್ತು ಮಗಳಿಗೆ ಸೋಂಕು ತಗುಲಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಧಾಕರ್ ಕ್ವಾರಂಟೈನ್ ಆಗಿದ್ದಾರೆ. ಈ ನಡುವೆ ಅಪ್ಪನ ಬರ್ತ್ ಡೇಗೆ ಮಗಳು ಮತ್ತು ಪತ್ನಿ ವಿಶೇಷವಾಗಿ ಶುಭ ಕೋರಿದ್ದಾರೆ. ಇದನ್ನೂ ಓದಿರಿ ಕೋವಿಡ್ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್ಡೌನ್ ಬೇಡ: ಪ್ರತಾಪ್ಸಿಂಹ
ಆಸ್ಪತ್ರೆಯಿಂದಲೇ ಮಗಳು ಮತ್ತು ಪತ್ನಿ ಸಧಾಕರ್ಗೆ ಟಿಕ್ಟಾಕ್ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ. ಅದನ್ನು ನೋಡಿದ ಸಚಿವರು ಫುಲ್ ಖುಷಿಯಾಗಿದ್ದು, ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
”ಆಸ್ಪತ್ರೆಯಿಂದ ರಾತ್ರಿ 12 ಗಂಟೆಗೆ ಮಗಳು ಮತ್ತು ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮಧುರವಾದದ್ದು, ಪವಿತ್ರ ಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್” ಎಂದು ವಿಡಿಯೋ ಜತೆಗೆ ಸುಧಾಕರ್ ಬರೆದುಕೊಂಡಿದ್ದಾರೆ. ಕರೊನಾ ಸೋಂಕಿನ ನಡುವೆಯೂ ಆತ್ಮಸ್ಥೈರ್ಯದಿಂದ ಖುಷಿಯಲ್ಲಿರುವ ಬಾಲಕಿಯ ಕಂಡು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆಸ್ಪತ್ರೆಯಿಂದ ರಾತ್ರಿ ೧೨ ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮದುರವಾದದ್ದು, ಪವಿತ್ರಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್ 🥰❤️🥰 pic.twitter.com/epxpGYfSEA
— Dr Sudhakar K (@mla_sudhakar) June 26, 2020
ಇನ್ನು ಸುಧಾಕರ್ ಬರ್ತ್ ಡೇಯನ್ನು ಅವರ ಬೆಂಬಲಿಗರು ಚಿಕ್ಕಬಳ್ಳಾಪುರದ ವಿವಿಧೆಡೆ ಆಚರಿಸಿದ್ದಾರೆ. ಧರ್ಮಛತ್ರ ರಸ್ತೆಯ ಗಣೇಶನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬೆಂಗಬಲಿಗರು, ಈಡುಗಾಯಿ ಹೊಡೆದರು. ಸುಧಾಕರ್ ಕುಟುಂಬಸ್ಥರು ಕರೊನಾದಿಂದ ಶೀಘ್ರವೇ ಗುಣಮುಖರಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದರು.
ಕೋವಿಡ್ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್ಡೌನ್ ಬೇಡ: ಪ್ರತಾಪ್ಸಿಂಹ