ತುಮಕೂರು: ಮೃತ್ರಿ ಸರ್ಕಾರವನ್ನು ಕೆ.ಎನ್.ರಾಜಣ್ಣ ಮತ್ತು ನಾನು ಸೇರಿಕೊಂಡು ಉರುಳಿಸಿದೆವು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಒಂದು ಉದ್ದೇಶ ಇತ್ತು. ಸರ್ಕಾರ ಪತನಕ್ಕೆ ನನ್ನ ಜತೆ ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಕೈಜೋಡಿಸಿದರು.
ಇದನ್ನೂ ಓದಿ ಕೊನೆಗೂ ಸೆರೆಯಾಯ್ತು ಮಗುವನ್ನು ತಿಂದ ಚಿರತೆ!
ಮೈತ್ರಿ ಸರ್ಕಾರ ನಿರ್ಮೂಲನೆ ಮಾಡುವ ಬಗ್ಗೆ ರಾಜಣ್ಣ ಅವರು ಲೋಕಸಭಾ ಚುನಾವಣೆ ವೇಳೆಯಲ್ಲಿ ಹೇಳಿದ್ದರು ಎಂದರು.
ಸರ್ಕಾರ ಬಿದ್ದ ನಂತರ ಕೆ.ಎನ್.ರಾಜಣ್ಣ ಅವರನ್ನು ಬಿಜೆಪಿಗೆ ಸೇರುವಂತೆ ಕೋರಿದೆ. ಆದರೆ ಅವರು ಬರಲಿಲ್ಲ. ನಾನು ಮೊದಲಿನಿಂದಲೂ ಕಾಂಗ್ರೆಸ್ನಲ್ಲಿ ಇದ್ದವನು. ಈಗ ಬಿಜೆಪಿಗೆ ಸೇರಿಲ್ಲವೆ. ರಾಜಣ್ಣ ಅವರು ಏಕೋ ಬಿಜೆಪಿಗೆ ಬರಲಿಲ್ಲ ಎಂದರು.
ಕೇವಲ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪೇದೆಯ ಅಕಾಲಿಕ ಮರಣದಿಂದ ಮುಗಿಲು ಮುಟ್ಟಿದ ಆಕ್ರಂದನ