More

    ಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪತನ ಮಾಡಿದೆವು

    ತುಮಕೂರು: ಮೃತ್ರಿ ಸರ್ಕಾರವನ್ನು ಕೆ.ಎನ್​.ರಾಜಣ್ಣ ಮತ್ತು ನಾನು ಸೇರಿಕೊಂಡು ಉರುಳಿಸಿದೆವು ಎಂದು ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಒಂದು ಉದ್ದೇಶ ಇತ್ತು. ಸರ್ಕಾರ ಪತನಕ್ಕೆ ನನ್ನ ಜತೆ ಕಾಂಗ್ರೆಸ್​ ಮಾಜಿ ಶಾಸಕ ಹಾಗೂ ಅಫೆಕ್ಸ್​ ಬ್ಯಾಂಕ್​ ಅಧ್ಯಕ್ಷ ಕೆ.ಎನ್​.ರಾಜಣ್ಣ ಕೈಜೋಡಿಸಿದರು.

    ಇದನ್ನೂ ಓದಿ   ಕೊನೆಗೂ ಸೆರೆಯಾಯ್ತು ಮಗುವನ್ನು ತಿಂದ ಚಿರತೆ!

    ಮೈತ್ರಿ ಸರ್ಕಾರ ನಿರ್ಮೂಲನೆ ಮಾಡುವ ಬಗ್ಗೆ ರಾಜಣ್ಣ ಅವರು ಲೋಕಸಭಾ ಚುನಾವಣೆ ವೇಳೆಯಲ್ಲಿ ಹೇಳಿದ್ದರು ಎಂದರು.

    ಸರ್ಕಾರ ಬಿದ್ದ ನಂತರ ಕೆ.ಎನ್​.ರಾಜಣ್ಣ ಅವರನ್ನು ಬಿಜೆಪಿಗೆ ಸೇರುವಂತೆ ಕೋರಿದೆ. ಆದರೆ ಅವರು ಬರಲಿಲ್ಲ. ನಾನು ಮೊದಲಿನಿಂದಲೂ ಕಾಂಗ್ರೆಸ್​ನಲ್ಲಿ ಇದ್ದವನು. ಈಗ ಬಿಜೆಪಿಗೆ ಸೇರಿಲ್ಲವೆ. ರಾಜಣ್ಣ ಅವರು ಏಕೋ ಬಿಜೆಪಿಗೆ ಬರಲಿಲ್ಲ ಎಂದರು.

    ಕೇವಲ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ​ ಪೇದೆಯ ಅಕಾಲಿಕ ಮರಣದಿಂದ ಮುಗಿಲು ಮುಟ್ಟಿದ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts