ಶಿವಮೊಗ್ಗ: ಜನಪ್ರತಿನಿಧಿಗಳಿಗೆ ಒಬ್ಬೊಬ್ಬರಾಗಿ ಕರೊನಾ ಭೀತಿ ಎದುರಾಗುತ್ತಿದೆ. ಈಗಾಗಲೇ ಹಲವು ರಾಜಕಾರಣಿಗಳು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.
ಮೊನ್ನೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದುದರಿಂದ ಕ್ವಾರಂಟೈನ್ಗೆ ಒಳಪಡುತ್ತಿರುವುದಾಗಿ ಹೇಳಿದ್ದರು. ಇದೀಗ ಸಚಿವ ಕೆ.ಎಸ್.ಈಶ್ವರಪ್ಪನವರಿಗೂ ಕರೊನಾ ಆತಂಕ ಎದುರಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಈಶ್ವರಪ್ಪ, ನನ್ನ ಮನೆಯ ಸಂಪರ್ಕದಲ್ಲಿದ್ದ ನನ್ನ ದೂರದ ಸಂಬಂಧಿ ಓರ್ವರಿಗೆ ಕರೊನಾ ದೃಢಪಟ್ಟಿದೆ. ಹಾಗಾಗಿ ನಾನು ಮತ್ತು ನನ್ನ ಕುಟುಂಬದವು ಕರೊನಾ ಟೆಸ್ಟ್ಗೆ ಒಳಪಟ್ಟಿದ್ದೆವು. ಇದೀಗ ಬಂದ ವರದಿಯಲ್ಲಿ ಕರೊನಾ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್ ಸ್ಟಂಟ್ಗೆ ವಿರೋಧ- ಬಾಲಕರಿಂದ ಬರ್ಬರ ಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಹಾಗೇ ಈಶ್ವರಪ್ಪನವರ ಗುಂಡಪ್ಪ ಶೆಡ್ನಲ್ಲಿರುವ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೂ ಸೋಮವಾರ ಸೋಂಕು ಕಂಡು ಬಂದಿದೆ. ಹಾಗಾಗಿ ಸದ್ಯ ಈಶ್ವರಪ್ಪನವರ ಕುಟುಂಬ ಕ್ವಾರಂಟೈನ್ಗೆ ಒಳಪಟ್ಟಿದೆ. (ಏಜೆನ್ಸೀಸ್)
ಮುಂದುವರಿದ ಸುದೀಪ್ ಸಮಾಜಮುಖಿ ಕಾರ್ಯ: 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಕಿಚ್ಚ