More

    ಸಚಿವ ಈಶ್ವರಪ್ಪ ಅವರಿಗೆ ಮೊಬೈಲ್​ ಕರೆ ಮಾಡಿ 48 ತಾಸುಗಳಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ಅನಾಮಧೇಯ

    ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಸಚಿವ ಕೆ.ಎಸ್​.ಈಶ್ವರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ.

    ತಮಿಳು ಭಾಷೆಯಲ್ಲಿ ನಿಂದಿಸಿದ ವ್ಯಕ್ತಿ 48 ತಾಸುಗಳಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕಿದ ವ್ಯಕ್ತಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

    ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೊಬೈಲ್​ಗೆ ಶುಕ್ರವಾರ ಅನಾಮಧೇಯನೊಬ್ಬ ಕರೆ ಮಾಡಿದ. ಸಚಿವರ ಆಪ್ತ ಸಹಾಯಕರು ಕರೆ ಸ್ವೀಕರಿಸಿದರು. ಆ ವ್ಯಕ್ತಿ ಸಚಿವರ ಜೊತೆ ಮಾತನಾಡಬೇಕು ಎಂದಾಗ ಸಹಾಯಕ ಸಮಸ್ಯೆ ಹೇಳಿಕೊಳ್ಳಲು ಮಾಡಿರಬೇಕು ಎಂದು ನಂಬಿ ಸಚಿವರಿಗೆ ಮೊಬೈಲ್​ ಫೋನ್​ ನೀಡಿದರು. ಆ ವ್ಯಕ್ತಿ ತಮಿಳು ಭಾಷೆಯಲ್ಲಿ ಮಾತನಾಡಿ, ಹಿಂದುತ್ವದ ಬಗ್ಗೆ ಬಹಳ ಮಾತನಾಡುತ್ತೀಯಾ. ಇನ್ನು ಇದು ನಡೆಯುವುದಿಲ್ಲ. ಮುಂದಿನ 48 ಗಂಟೆಯೊಳಗೆ ನಿಮ್ಮ ಕಥೆ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಸಚಿವರಿಗೆ ಕರೆ ಮಾಡಿದ್ದ ಮೊಬೈಲ್ ನಂಬರ್ ಪರಿಶೀಲನೆಗೆ ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts