More

    ಗಣಿ ಕಂಪನಿಯಲ್ಲಿ ಆಯುಧ ಪೂಜೆ

    ಹಟ್ಟಿಚಿನ್ನದಗಣಿ: ಚಿನ್ನದಗಣಿ ಕಂಪನಿಯ ವಿವಿಧ ವಿಭಾಗಗಳಲ್ಲಿ ಸೋಮವಾರ ಆಯುಧ ಪೂಜೆ ಸಲ್ಲಿಸಲಾಯಿತು.

    ನ್ಯೂ ಸಕ್ಯೂಲರ್ ಶಾಫ್ಟಿನಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್ ಪೂಜೆ ಸಲ್ಲಿಸಿದರು. ಆಡಳಿತ ಕಚೇರಿ, ಮಲ್ಲಪ್ಪ ಶಾಫ್ಟ್, ಸೆಂಟ್ರಲ್ ಶಾಫ್ಟ್, ವಿಲೇಜ್ ಶಾಫ್ಟ್, ಮಿಲ್ ವಿಭಾಗ, ಆಸ್ಪತ್ರೆ, ಗಣಿ ವೃತ್ತಿ ತರಬೇತಿ ಕೇಂದ್ರ, ಊಟಿ ಹೊಸ ಯೋಜನೆ, ಹೀರಾ-ಬುದ್ಧಿನ್ನಿ ಹೊಸ ಯೋಜನೆ, ಆಸ್ಪತ್ರೆ, ತಾಂತ್ರಿಕ ವಿಭಾಗ ಸೇರಿ ನಾನಾ ಕಡೆ ಪೂಜೆ ಸಲ್ಲಿಸಲಾಯಿತು. ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಟಿ.ರವಿಕುಮಾರ್, ಉಪಪ್ರಧಾನ ವ್ಯವಸ್ಥಾಪಕ ಸೈಫುಲ್ಲಾ ಖಾನ್, ಗಣಿ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಅರುಣವ್ ಘೋಷ್, ವ್ಯವಸ್ಥಾಪಕ ಸಂತೋಷ್, ಭದ್ರತಾ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಮೇಜರ್ ದಸ್ತಗಿರಿ ಸಾಬ್, ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಯಮನೂರಪ್ಪ, ವ್ಯವಸ್ಥಾಪಕರಾದ ಬಾಲಾಜಿ, ಮೇಘರಾಜ್, ಭದ್ರತಾಧಿಕಾರಿ ಬಾಲಚಂದ್ರ ನರಸನಗಿ, ಕಾರ್ಮಿಕ ಸಂಘದ ಚುನಾಯಿತ ಪ್ರತಿನಿಧಿಗಳಾದ ಶಾಂತಪ್ಪ ಆನ್ವರಿ, ತಿಪ್ಪಣ್ಣ, ಚಂದ್ರು, ಯಂಕೋಬ್ ಮಿಯ್ಯಪೂರ್, ದುರಗಪ್ಪ, ಯಲ್ಲಪ್ಪ, ಕನಕರಾಜ್‌ಗೌಡ ಗುರೀಕಾರ್, ಹನುಮಂತಗೌಡ ಗುರೀಕಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts