ಗುಂಡ್ಲುಪೇಟೆ: ತಾಲೂಕಿನ ಲಕ್ಕೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಶಿವರುದ್ರಪ್ಪ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಂಜಪ್ಪ 8 ಮತಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ಚಂದ್ರು(4) ಮತ ಪಡೆದುಕೊಂಡರು. ಉಪಾಧ್ಯಕ್ಷರಾಗಿ ಶಿವರುದ್ರಪ್ಪ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪದ್ಮನಾಭ ಕಾರ್ಯನಿರ್ವಹಿಸಿದರು.
ನಿರ್ದೇಶಕರಾದ ನಾಗಭೂಷಣ, ನಂದೀಶ್, ಗುರುನಂಜಪ್ಪ, ನಟರಾಜು, ಮಂಗಳಮ್ಮ, ಮಣಿಯಮ್ಮ, ಚನ್ನಶೆಟ್ಟಿ, ಸಿದ್ದಯ್ಯ, ಮುಖ್ಯಕಾರ್ಯನಿರ್ವಾಹಕ ರವೀಂದ್ರ ಹಾಗೂ ಮುಖಂಡರು ಹಾಜರಿದ್ದರು.