ನವದೆಹಲಿ : ದೆಹಲಿ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಭಾರೀ ಗದ್ದಲದ ನಡುವೆ ಕಲಾಪ ಆರಂಭವಾಯಿತು. ವಿಪಕ್ಷವಾದ ಬಿಜೆಪಿಯ ಶಾಸಕರು ಮತ್ತು ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ(ಎಎಪಿ)ಯ ಶಾಸಕರು ಸದನದ ಬಾವಿಗೆ ಬಂದು ಪರಸ್ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ತಂತಮ್ಮ ಸ್ಥಾನಗಳಿಗೆ ತೆರಳಲು ಸ್ಪೀಕರ್ ರಾಮ್ ನಿವಾಸ್ ಗೋಯಲ್ ಸೂಚಿಸಿದರು. ಆಗ ಸ್ಥಾನಕ್ಕೆ ತೆರಳದೆ ಗದ್ದಲ ಮುಂದುವರೆಸಿದ ಬಿಜೆಪಿಯ ಶಾಸಕರಾದ ವಿಜೇಂದರ್ ಗುಪ್ತ ಮತ್ತು ಅನಿಲ್ ಬಾಜಪೇಯಿ ಅವರನ್ನು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಮಾರ್ಷಲ್ಗಳೊಂದಿಗೆ ಹೊರಕಳುಹಿಸಲಾಯಿತು ಎನ್ನಲಾಗಿದೆ.
ಇದನ್ನೂ ಓದಿ: ರೌಂಡ್ ಆಫ್ 16ನಿಂದ ಹೊರಬಿದ್ದ ಮೇರಿ ಕೋಂ; ಪದಕದ ಆಸೆ ನಿರಾಸೆ
ಈ ಜಿದ್ದಾಜಿದ್ದಿಯಲ್ಲಿ ಎಎಪಿ ಶಾಸಕರ ಮೇಲೆ ಅವಹೇಳನಕಾರಿಯಾಗಿ ಮಾತಾಡಿದಿರಿ ಎಂದು ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮಾ ಅವರಿಗೆ ಕ್ಷಮೆ ಕೋರಲು ಸ್ಪೀಕರ್ ಹೇಳಿದರು. ಇದಕ್ಕೆ ನಿರಾಕರಿಸಿದ ಶರ್ಮ ಅವರನ್ನು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಲಾಯಿತು ಎಂದು ವರದಿಗಳು ಹೇಳಿವೆ. (ಏಜೆನ್ಸೀಸ್)
ರಾಜಭವನದಲ್ಲಿ ಹಣ್ಣಿನ ತೋಟ! ಗಿಡ ನೆಟ್ಟು ನೀರೆರೆದ ರಾಜ್ಯಪಾಲ ಗೆಹ್ಲೋತ್