More

    ಬೆಂಕಿಪೊಟ್ಟಣ ಕೇಳುವ ನೆಪದಲ್ಲಿ ಲಾರಿ ಚಾಲಕ, ಕ್ಲೀನರ್‌ಗೆ ದರೋಡೆ

    ಶಿವಮೊಗ್ಗ: ಕೇರಳಕ್ಕೆ ಭತ್ತದ ಲೋಡ್ ಮಾಡಿಕೊಂಡು ಹೊರಟಿದ್ದ ಚಾಲಕ ಮತ್ತು ಕ್ಲೀನರ್‌ಗೆ ಬೆಂಕಿಪೊಟ್ಟಣ ಕೇಳುವ ನೆಪದಲ್ಲಿ ಲಾರಿಯ ಕ್ಯಾಬೀನ್ ಹತ್ತಿದ ಅಪರಿಚಿತರು ಚಾಕುವಿನಿಂದ ಹಲ್ಲೆ ನಡೆಸಿ ಜೇಬಿನಲ್ಲಿದ್ದ 8 ಸಾವಿರ ರೂ. ದರೋಡೆ ಮಾಡಿರುವ ಘಟನೆ ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
    ಕೇರಳ ರಾಜ್ಯ ಕೊಣ್ಣೂರಿನ ಲಾರಿ ಚಾಲಕ ರಶೀದ್ ಮತ್ತು ಪೊನ್ನೂರು ಗ್ರಾಮದ ಕ್ಲೀನರ್ ಕಮೃದ್ಧೀನ್ ದರೋಡೆಗೆ ಒಳಗಾದವರು. ಶನಿವಾರ ಭತ್ತದ ಲೋಡ್ ಮಾಡಿಕೊಂಡು ಕೇರಳಕ್ಕೆ ಹೊರಟಿದ್ದರು. ರಾತ್ರಿ ಆಗಿದ್ದರಿಂದ ತರೀಕೆರೆ ರಸ್ತೆಯ ಸಮೀಪದ ದಿ ಸೌತ್ ಮಲಬಾರ್ ರೋಡ್‌ವೇಸ್ ಬಳಿ ಲಾರಿ ನಿಲ್ಲಿಸಿ ಮಲಗಿದ್ದರು. ಬೆಳಗಿನಜಾವ 2.50ರ ಸುಮಾರಿಗೆ ಬೈಕ್‌ನಲ್ಲಿ ಬಂದ ಮೂವರು ದರೋಡೆ ಮಾಡಿದ್ದಾರೆ.
    ಲಾರಿ ಕ್ಯಾಬೀನ್ ಹತ್ತಿ ಕ್ಲೀನರ್ ಬಳಿ ಬೆಂಕಿ ಪೊಟ್ಟಣ ಕೇಳಿದ್ದಾರೆ. ಕ್ಲೀನರ್ ಕಮೃದ್ಧೀನ್ ಚಾಲಕ ರಶೀದ್‌ನನ್ನು ಎಬ್ಬಿಸಿದ್ದರು. ಈ ವೇಳೆ ಕ್ಲೀನರ್ ಕೈ-ಕಾಲಿಗೆ ಚಾಕುನಿಂದ ಹಲ್ಲೆ ನಡೆಸಿ ಹಣ ಕೊಡುವಂತೆ ಬೆದರಿಕೆ ಹಾಕಿ ಮುಷ್ಠಿಯಿಂದ ಹಲ್ಲೆ ನಡೆಸಿ ಜೇಬಿನಲ್ಲಿದ್ದ 8 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ವಿಚಾರವನ್ನು ಟ್ರಾನ್ಸ್‌ಪೋರ್ಟ್ ಮಾಲೀಕ ಜಯಣ್ಣ ಅವರಿಗೆ ತಿಳಿಸಿದ್ದು ಭದ್ರಾವತಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಭದ್ರಾವತಿ ಹಳೇನಗರ ಠಾಣೆಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts