ಧಾರವಾಡ: ಸೋಮವಾರ ನಡೆದ ಹೋಳಿ ಹಬ್ಬದಲ್ಲಿ ಕಾಮಣ್ಣನಿಗೂ ಫೇಸ್ಮಾಸ್ಕ್ ಹಾಕಿ ಪೂಜೆ ಮಾಡಿದ ಘಟನೆ ವಿಜಯಾನಂದನಗರದಲ್ಲಿ ನಡೆದಿದೆ.
ವಿಜಯಾನಂದ ನಗರದ ಸರ್ಕಲ್ನಲ್ಲಿ ಈ ಮಾಸ್ಕ್ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದನ್ನು ನೋಡಿ ಕಾಮಣ್ಣನಿಗೂ ಕೊರೊನಾ ಭೀತಿನಾ? ಎಂದು ಹುಬ್ಬೇರಿಸಬೇಡಿ.
ಈ ಹೋಳಿ ಕಾಮಣ್ಣ ಕೊರೊನಾ ಭಯದಿಂದ ಮಾಸ್ಕ್ ಹಾಕಿಕೊಂಡಿದ್ದಲ್ಲ. ಬದಲಿಗೆ ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಕಿಕೊಂಡಿದ್ದ.
ವಿಜಯಾನಂದ ನಗರದ ಸರ್ಕಲ್ನಲ್ಲಿ ಸ್ಥಳೀಯರು ಪ್ರತಿಷ್ಠಾಪಿಸಿದ್ದ ಹೋಳಿ ಕಾಮಣ್ಣನಿಗೆ ಮಾಸ್ಕ್ ಹಾಕಿಯೇ ಪೂಜೆ ಮಾಡಿದರು. ಈಗ ಎಲ್ಲೆಡೆ ಕೊರೊನಾದ್ದೇ ಆತಂಕವಾಗಿದ್ದರಿಂದ ತಮ್ಮದೇ ವಿಭಿನ್ನ ಮಾರ್ಗದ ಮೂಲಕ ಜಾಗೃತಿ ಮೂಡಿಸಿದ್ದಾರೆ. ಮಾಸ್ಕ್ ಹಾಕಿದ್ದಂತೆಯೇ ದಹನವನ್ನೂ ಮಾಡಿದ್ದಾರೆ. (ದಿಗ್ವಿಜಯ)
ಒತ್ತುವರಿ ತೆರವು ನೆಪದಲ್ಲಿ ಅಡಕೆ ತೆಂಗು ನಾಶ
ಬಂಡವಾಳ ಪರ್ಯಾಪ್ತತಾ ಅನುಪಾತ, ಬ್ಯಾಂಕ್ಗಳ ಸುರಕ್ಷತೆಯ ಮಾನದಂಡ: ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ