blank

ಸಾಸಲುವಿನಲ್ಲಿ ಸಂಭ್ರಮದ ಮಾರಿಹಬ್ಬ

blank


ಮಂಡ್ಯ : ಕಿಕ್ಕೇರಿ ಹೋಬಳಿಯ ಶರಣರ ಗ್ರಾಮವಾದ ಸಾಸಲುವಿನಲ್ಲಿ ಗುರುವಾರ ಮಾರಿಹಬ್ಬ ಸಂಭ್ರಮ, ಸಡಗರದಿಂದ ನೆರವೇರಿತು. ಮುಂಜಾನೆಯೇ 10 ಕಿ.ಮೀ. ದೂರದಲ್ಲಿರುವ ಹೋಬಳಿಯ ಗಾಣದಹಳ್ಳಿ ಬಳಿಯ ಹೇಮಾವತಿ ನದಿಯಿಂದ ಗಂಗೆ ತರಲಾಯಿತು.


ಮಂಗಳವಾದ್ಯದೊಂದಿಗೆ ಗ್ರಾಮಕ್ಕೆ ಪ್ರವೇಶ ಮಾಡಲಾಯಿತು. ಕಳಸ ಹೊತ್ತ ಮಹಿಳೆಯರು ಗ್ರಾಮದ ಮಾರಿ ಅಮ್ಮನವರ ಗುಡಿ ಬಳಿಗೆ ಸಾಗಿದರು. ಪವಿತ್ರ ಗಂಗೆಯ ಕಳಸವನ್ನು ದೇವಿಯ ಮುಂದೆ ಇಟ್ಟು ಪೂಜಿಸಲಾಯಿತು. ಮಾರಮ್ಮ ದೇವಿಗೆ ಕಳಸದಿಂದ ಅಭಿಷೇಕ ನೆರವೇರಿಸಲಾಯಿತು.


ಮಹಿಳೆಯರು ತಂಬಿಟ್ಟಿನ ಆರತಿ ಬೆಳಗಿದರು. ದೇವಿಗೆ ಅರಿಶಿಣ ಹಚ್ಚಿ, ಬೇವಿನ ಸೊಪ್ಪು ಹಾಕಿದರು. ಎಣ್ಣೆ ಮಜ್ಜನ ಮಾಡಿಸಿದರು.ದೇವಿಗೆ ಪ್ರಿಯವಾದ ಮೊಸರನ್ನ, ತಂಬಿಟ್ಟು, ಅವರೆಕಾಳು ಮತ್ತಿತರ ಧಾನ್ಯಗಳನ್ನು ನೈವೇದ್ಯವಾಗಿ ಅರ್ಪಿಸಿದರು. ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ರೋಗರುಜಿನ ಬಾರದಂತೆ, ಸಕಾಲಕ್ಕೆ ಮಳೆ ಬರಲಿ, ಸಮೃದ್ಧಿಯಾಗಿ ಬೆಳೆ ಬೆಳೆಯಲಿ ಎಂದು ಪ್ರಾರ್ಥಿಸಿದರು.


ಗ್ರಾಮವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ವಿವಿಧ ರಂಗವಲ್ಲಿಗಳಿಂದ ಅಲಂಕರಿಸಲಾಗಿತ್ತು. ಇಡೀ ಗ್ರಾಮದ ಜನತೆ ಸಾಮರಸ್ಯದಿಂದ ಭಾಗವಹಿಸಿ ಹಬ್ಬದಲ್ಲಿ ಮಳೆ, ಬೆಳೆಗಾಗಿ ವಿಶೇಷವಾಗಿ ಪಂಜಿನ ಆರತಿಯೊಂದಿಗೆ ಮೊರೆ ಇಟ್ಟರು.

Share This Article

ಚಳಿಗಾಲದಲ್ಲಿ ಮುಂಜಾನೆ ಬೇಗ ಏಳಲು ಸಾಧ್ಯವಾಗ್ತಿಲ್ಲವೆ? ಈ ಸಲಹೆಗಳನ್ನು ಅನುಸರಿಸಿ… Wake up Tips

Wake up Tips : ಚಳಿಗಾಲದಲ್ಲಿ ಕಣ್ಣು ತೆರೆದರೂ ಸ್ವಲ್ಪ ಹೆಚ್ಚು ಹೊತ್ತು ಮಲಗಬೇಕು ಎನಿಸುತ್ತದೆ.…

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…