More

    ಮಾರಿಯಮ್ಮ ದೇವಾಲಯ ವಾರ್ಷಿಕ ಉತ್ಸವ

    ವಿರಾಜಪೇಟೆ: ಮೂರ್ನಾಡು ಹೊದ್ದೂರು ಕಣ್ಣ ಬಲಮುರಿ ಗ್ರಾಮದ ಶ್ರೀ ಮಾರಿಯಮ್ಮ ದೇವಾಲಯ ವಾರ್ಷಿಕ ಉತ್ಸವ ಹಾಗೂ ಮರು ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯಗಳು ಇತ್ತೀಚೆಗೆ ಶ್ರದ್ಧಾಭಕ್ತಿಯಿಂದ ಜರುಗಿದವು.

    ಗಣಪತಿ ಹೋಮ, ಶ್ರೀ ದೇವಿಯ ಪೇಟೆ ಮೆರವಣಿಗೆ ಮಂಗಳವಾದ್ಯದೊಡನೆ ನೆರವೇರಿತು. ವಿರಾಜಪೇಟೆ, ಮಡಿಕೇರಿ, ಅಮ್ಮತ್ತಿ ಭಾಗದಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

    ರಾತ್ರಿ ಶ್ರೀ ದೇವಿಗೆ ತಂಬಿಟ್ಟು ಆರತಿ ಸೇವೆ ನಡೆಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಗ್ರಾಮಸ್ಥರು ಹರಕೆ ಒಪ್ಪಿಸಿದರು. ದೇವಾಲಯ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

    ಶ್ರೀ ಮಾರಿಯಮ್ಮ ಸೇವಾ ಸಮಿತಿ ಅಧ್ಯಕ್ಷ ಎಚ್.ಟಿ. ಲಕ್ಷ್ಮ್ಮಣ್, ತಕ್ಕ ಮುಖ್ಯಸ್ಥ ಎಚ್.ಎಚ್.ರಮೇಶ್, ಎಚ್.ಟಿ. ರಘು, ಎಚ್.ಬಿ. ಗಣೇಶ್, ಎಚ್.ಜಿ. ತಿರುಮಲೇಶ್ ಇತರರು ದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts