More

    ಈ ಪ್ರದೇಶದಲ್ಲಿ ಪದೇಪದೆ ಅಪಘಾತ; 3 ದಿನಗಳಲ್ಲಿ ನಾಲ್ಕೈದು ಆ್ಯಕ್ಸಿಡೆಂಟ್: ಇಂದು ಮತ್ತೊಂದು ಸಾವು

    ತುಮಕೂರು: ರಾಜ್ಯದಲ್ಲಿ ಇತ್ತೀಚೆಗೆ ಭಾರಿ ಅಪಘಾತಗಳು ಸಂಭವಿಸುತ್ತಿದ್ದು, ಇಲ್ಲೊಂದು ಪ್ರದೇಶದಲ್ಲಿ ಕೂಡ ಮೇಲಿಂದ ಮೇಲೆ ಆ್ಯಕ್ಸಿಡೆಂಟ್ ಆಗಿದ್ದು, ಇಂದು ಕೂಡ ಅಪಘಾತಕ್ಕೆ ಒಬ್ಬರು ಬಲಿಯಾಗಿದ್ದಾರೆ.

    ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ನಿವಾಸಿ ವೆಂಕಟೇಶ್​ (35) ಸಾವಿಗೀಡಾದ ವ್ಯಕ್ತಿ. ದೊಡ್ಡಗುಣಿ ಬಳಿಯ ಹರೇನಹಳ್ಳಿ ಗ್ರಾಮದಲ್ಲಿ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

    ಕೊಂಡ್ಲಿ- ದೊಡ್ಡಗುಣಿ ಬಳಿ ಪದೇಪದೆ ಅಪಘಾತಗಳು ಸಂಭವಿಸುತ್ತಿದ್ದು ಆತಂಕ ಮೂಡಿಸಿದೆ. ಅದರಲ್ಲೂ ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ನಾಲ್ಕೈದು ಅಪಘಾತಗಳು ಸಂಭವಿಸಿದೆ. ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ಉಂಟಾಗಿದೆ.

    ಗುಬ್ಬಿಯಲ್ಲಿ ಭೀಕರ ಅಪಘಾತ: ತಂದೆ-ತಾಯಿ-ಮಗ ಸೇರಿ ನಾಲ್ವರು ದುರ್ಮರಣ

    ಭೀಕರ ಅಪಘಾತ: ಸೇತುವೆಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದ ಕಾರು, ನಾಲ್ವರ ಸಾವು

    ವಿಧಿಯೇ ನೀನೆಷ್ಟು ಕ್ರೂರಿ? ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮೂವರು ಕೂಲಿ ಕಾರ್ಮಿಕರು ದುರ್ಮರಣ! ಆನೇಕಲ್​ನಲ್ಲಿ ಭೀಕರ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts