More

    ಕುಡಿವ ನೀರಿನ ಕೆರೆ ತುಂಬಿಸಲು ಸಚಿವ ಸೂಚನೆ

    ಮಾನ್ವಿ: ಪಟ್ಟಣ ಜನತೆಗೆ ಕುಡಿವ ನೀರಿನ ತೊಂದರೆಯಾಗದಂತೆ ಕೆರೆಯನ್ನು ತುಂಬಿಸಿಕೊಳ್ಳುವಂತೆ ಪುರಸಭೆ ಸಿಒ ಗಂಗಾಧರಗೆ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್‌ಎಸ್ ಬೋಸರಾಜು ಸೂಚಿಸಿದರು.

    ತಾಲೂಕಿನ ರಬ್ಬಣಕಲ್ ಗ್ರಾಮದಲ್ಲಿ ಸೋಮವಾರ ಕುಡಿವ ನೀರಿನ ಕೆರೆಯಲ್ಲಿ ನೀರಿನ ಸಾಮಥ್ಯ ವೀಕ್ಷಣೆ ಮಾಡಿ ಮಾತನಾಡಿದರು. ಪಟ್ಟಣದಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಪೂರೈಸಲು ಕೆರೆ ನಿರ್ಮಾಣ ಮಾಡಲಾಗಿದೆ. 10 ಮೀಟರ್ ಸಂಗ್ರಹಣ ಸಾಮರ್ಥ್ಯವಿರುವ ಕೆರೆಯಲ್ಲಿ ನೀರಿನ ಮಟ್ಟ 2 ಮೀಟರ್ ಇದೆ. ಹೀಗೆ ಕಡಿಮೆಯಾದರೆ ನೀರಿನ ಕೊರತೆಯಾಲಿದೆ ಎಂದರು.

    ತುಂಗಭದ್ರ ಜಲಾಶಯದಿಂದ ನ.21ರವರೆಗೆ ಕಾಲುವೆಗೆ ನೀರು ಬಿಡುತ್ತಿದ್ದು, ಅಷ್ಟರೊಳಗೆ ಕೆರೆ ತುಂಬಿಸಕೊಳ್ಳಬೇಕು. ಬೇಸಿಗೆಯಲ್ಲಿ ತೊಂದರೆಯಾಗಬಾರದು. ಕಾತರಕಿ ನದಿಯಿಂದ ಅಥಾವ ಕಾಲುವೆಯಿಂದ ನೀರನ್ನು ಕೆರೆಗೆ ತುಂಬಿಸಿ ಹಾಗೂ ಕೆರೆಯ ಸುತ್ತಮುಲ್ಲಿನ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಹೇಳಿದರು.

    ತಹಸೀಲ್ದಾರ್ ರಾಜು ಪಿರಂಗಿ, ಶಾಸಕ ಹಂಪಯ್ಯನಾಯಕ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಸಲೀಂಪಾಷಾ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts