More

    ‘ವಿಜಯಾನಂದ’ ಚಲನಚಿತ್ರ ಪ್ರೇರಣಾದಾಯಕ ಜೀವನಗಾಥೆ

    ಮಾನ್ವಿ: ಡಾ.ವಿಜಯಸಂಕೇಶ್ವರರ ಜೀವನ ಆಧಾರಿತ ವಿಜಯಾನಂದ ಚಲನಚಿತ್ರಕ್ಕೆ ಪಟ್ಟಣದ ಅಪರ್ಣ ಚಿತ್ರಮಂದಿರದಲ್ಲಿ ಶುಕ್ರವಾರ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.

    ಬಹು ನಿರೀಕ್ಷಿತ ವಿಜಯಾನಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗೆ ಸಾಧನೆ ಮಾಡಬಹುದು ಎನ್ನುವ ಮಾಹಿತಿ ನಮ್ಮೆಲ್ಲರಿಗೆ ಮಾದರಿಯಾಗಿದೆ. ಚಿತ್ರದಲ್ಲಿ ಒಳ್ಳೆಯ ಸಂಭಾಷಣೆ ಇವೆ. ಸಂಗೀತ ಕೂಡ ಚೆನ್ನಾಗಿದೆ. ದೃಶ್ಯಗಳನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಪ್ರತಿಯೊಬ್ಬ ಯುವಕರು ನೋಡಲೇ ಬೇಕಾದ ಚಿತ್ರವಾಗಿದೆ. ಒಂದು ಲಾರಿಯಿಂದ ಜೀವನದ ಪಯಣ ಆರಂಭಿಸಿ ಎಂಥ ಅಡೆತಡೆಗಳು ಬಂದರೂ ಎದುರಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಡಾ.ವಿಜಯ ಸಂಕೇಶ್ವರರು ನಮಗೆಲ್ಲ ಪ್ರೇರಣೆಯಾಗಿದ್ದಾರೆ ಎಂದು ಚಿತ್ರ ವಿಕ್ಷಣೆ ಮಾಡಿದ ಡಾ.ಶರಣಬಸವ ಗವಿಗಟ್ಟು ಹೇಳಿದರು.

    ವಿದ್ಯಾರ್ಥಿಗಳು ವಿಜಯಾನಂದ ಚಿತ್ರ ನೋಡಬೇಕು. ಈ ಮೂಲಕ ಜೀವನದಲ್ಲಿ ಪ್ರೇರಣೆ ಸಿಗಲಿದೆ. ಪಾಲಕರು, ಗುರು, ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಅರ್ಥವಾಗುತ್ತದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಸಾಧಕರಾಗುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಪ್ರೇಕ್ಷಕರಾದ ನರಸಪ್ಪ, ಹನುಮಂತ, ಬಾಗಯ್ಯ, ಯಲ್ಲಪ್ಪ, ಹುಸೇನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts