More

    ದೊಡ್ಡ ಮಠದ ಸ್ವಾಮೀಜಿಗೆ ಮಂತ್ರಾಕ್ಷತೆ

    ಪಂಚನಹಳ್ಳಿ: ಅಯೋಧ್ಯೆ ನಿರ್ಮಿಸುತ್ತಿರುವ ರಾಮ ಮಂದಿರ ಉದ್ಘಾಟನೆ ಜ.22ರಂದು ನೆರವೇರಲಿದ್ದು, ಇದರ ಅಂಗವಾಗಿ ಮಂದಿರದ ಪವಿತ್ರ ಮಂತ್ರಾಕ್ಷತೆ ಮತ್ತು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದ ದೊಡ್ಡ ಮಠದ ಶ್ರೀ ಪ್ರಭುಕುಮಾರ ಸ್ವಾಮೀಜಿಗೆ ನೀಡಿ ಆಹ್ವಾನಿಸಲಾಯಿತು.

    ಕೆ.ಬಿದರೆ ಗ್ರಾಮದಲ್ಲಿ ಪ್ರತಿ ಮನೆಗೆ ತೆರಳಿ ಮಂತ್ರಾಕ್ಷತೆ ಮತ್ತು ಆಹ್ವಾನ ಪತ್ರಿಕೆಯನ್ನು ವಿತರಿಸಲಾಯಿತು. ಕಡೂರು ತಾಲೂಕಿನಾದ್ಯಂತ ಜ.15ರವರೆಗೆ ಪ್ರತಿಯೊಂದು ಮನೆಗೂ ರಾಮ ಮಂದಿರದ ಮಂತ್ರಾಕ್ಷತೆ ಮತ್ತು ಆಹ್ವಾನ ಪತ್ರಿಕೆ ವಿತರಿಸುವ ಸಂಕಲ್ಪ ಮಾಡಲಾಗಿದೆ. ಇದರ ಅಂಗವಾಗಿ ಜ.7ರಂದು ಮಹಾಭಿಯಾನ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ, ಪ್ರಮುಖರಾದ ಅಶೋಕ್‌ಕುಮಾರ್, ರೇಣುಕಾರಾಧ್ಯ, ಚಂದ್ರಮ್ಮ , ಗಿರೀಶ್, ಕಾಶಿನಾಥ್, ಪ್ರಭುಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts