ಕೊಚ್ಚಿನ್: ಹಲವು ಪ್ರಶಸ್ತಿ ಪುರಸ್ಕೃತ ಪ್ರಸಿದ್ದ ಫಿಲ್ಮ್ಮೇಕರ್ ಸನಲ್ ಕುಮಾರ್ ಶಶಿಧರನ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ನಟಿ ಮಂಜು ವಾರಿಯರ್ ನೀಡಿದ ದೂರಿನ ಮೇರೆಗೆ ಅವರ ನಿವಾಸಕ್ಕೆ ತೆರಳಿ ಬಂಧಿಸಲಾಗಿದೆ.
ತಿರುವನಂತಪುರಂನಲ್ಲಿರುವ ಸನಾಲ್ (45) ನಿವಾಸದಲ್ಲಿ ಬಂಧಿಸಿ, ಕೊಚ್ಚಿನ್ಗೆ ಕರೆತರಲಾಗಿದೆ. ಕೊಚ್ಚಿನ್ನಲ್ಲೇ ದೂರು ದಾಖಲಾಗಿರುವುದರಿಂದ ಪ್ರಕರಣದ ವಿಚಾರಣೆಗೆ ಅವರನ್ನು ಇಲ್ಲೇ ಕರೆತರಲಾಗಿದೆ.
ಯಾವ ಕಾರಣಕ್ಕೆ ಸನಾಲ್ ಅವರನ್ನು ಬಂಧಿಸಲಾಗಿದೆ. ಮಂಜು ವಾರಿಯರ್ ನೀಡಿರುವ ದೂರಿನಲ್ಲಿ ಏನಿದೆ ಎಂಬುದೇ ಕುತೂಹಲ ಮೂಡಿಸಿದ್ದು ಕಾರಣ ಇಲ್ಲಿದೆ.
ಇತ್ತೀಚೆಗೆ ಫೇಸ್ಬುಕ್ ಪೋಸ್ಟ್ ಮಾಡಿದ್ದ ಸನಲ್ , ಮಂಜು ವಾರಿಯರ್ ಜಿವಕ್ಕೆ ಅಪಾಯವಿದೆ. ಅವಳು ತನ್ನ ಹತ್ತಿರದ ಜನರಿಮದಲೇ ಅಪಾಯವನ್ನು ಎದುರಿಸುತ್ತಿದ್ದಾಳೆ. ಅವಳು ಕೆಲವರ ವಶದಲ್ಲಿದ್ದಾಳೆ. ಮಂಜುಗೆ ಏನಾದರೂ ತೊಂದರೆಯಾದರೆ ಆಕೆಯ ಮ್ಯಾನೇಜರ್ಗಳಾದ ಬಿನೀಶ್ ಚಂದ್ರನ್ ಮತ್ತು ಬಿನು ನಾಯರ್ ಜವಾಬ್ದಾರರು ಎಂದು ಹೆಸರು ಪ್ರಸ್ತಾಪಿಸಿ ಆರೋಪಿಸಿದ್ದರು. ಇದೀಗ ಈ ಪೋಸ್ಟ್ ಸನಲ್ಗೆ ಮುಳುವಾಗಿದೆ.
ಬೇಟೆಯಾಡಿದ್ದ ಜಿಂಕೆ ಮಾಂಸದ ಸಮೇತ ಸಿಕ್ಕಿಬಿದ್ದ ಐವರು! 2 ನಾಡಬಂದೂಕು ವಶ