ಮಂಡ್ಯ: ಮಂಡ್ಯದಲ್ಲಿ ಪಡಿತರ ಅಕ್ಕಿಯ ಅಕ್ರಮ ಮಾರಾಟ ದಂಧೆ ಇನ್ನೂ ನಿಂತಿಲ್ಲ. ಇಂದು ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಅಕ್ರಮವಾಗಿ ಪಡಿತರ ಅಕ್ಕಿಯ 150 ಮೂಟೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಪತ್ತೆಯಾಗಿದೆ.
ರೈಸ್ ಮಿಲ್ಗೆ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಅನ್ನೋ ಖಚಿತ ಮಾಹಿತಿಯ ಮೇರೆಗೆ ಮಂಡ್ಯ ಪೊಲೀಸರು ಲಾರಿಯೊಂದನ್ನು ತಡೆದು ಪರಿಶೀಲನೆ ನಡೆಸಿದರು. ಲಾರಿಯಲ್ಲಿ 150 ಮೂಟೆ ಅಕ್ಕಿಯನ್ನು ಪಾಲಿಶ್ ಮಾಡಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದುದು ಪತ್ತೆಯಾಯಿತು. ಅಕ್ಕಿ ಮೂಟೆಗಳನ್ನು ವಾಹನದ ಸಮೇತ ಜಪ್ತಿಪಡಿಸಿಕೊಂಡಿರುವ ಪೊಲೀಸರು ಚಾಲಕನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಂಡ್ಯ ಪಶ್ವಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
9 ವರ್ಷಗಳ ನಂತರ ಜಾತಿ ನೆನಪಾಯ್ತಾ? ಎರಡನೇ ಮದ್ವೇಗೆ ಸಜ್ಜಾದವನ ವಿರುದ್ಧ ಪತ್ನಿ ದೂರು
ಮದುವೆ ಆರತಕ್ಷತೆಗೆ ಬರಲು ಬಂಧುಮಿತ್ರರಿಗೆ ‘ನೋಟೀಸ್’! ವಕೀಲ ಜೋಡಿ ನೀಡಿದ ಆಮಂತ್ರಣಪತ್ರಿಕೆ ನೋಡಿ!