ಭೋಪಾಲ್: ಅಧಿಕಾರಿಗಳ ಅಚಾತುರ್ಯದಿಂದ ವ್ಯಕ್ತಿಯೋರ್ವ ತನ್ನ ಒಂದು ವರ್ಷದ ಮುಗುವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರಿದ್ದ ವೇದಿಕೆ ಮೇಲೆ ಎಸೆದು ಅಸಹಾಯಕತೆ ಹೊರಹಾಕಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ತನ್ನ ಮಗುವಿನ ಚಿಕಿತ್ಸೆಗೆ ಹಣವನ್ನು ಭರಿಸಲಾಗದೇ ಈ ರೀತಿ ಮಾಡಿದ್ಧಾಗಿ ವ್ಯಕ್ತಿ ಒಪ್ಪಿಕೊಂಡಿದ್ಧಾನೆ.
ಮುಖ್ಯಮಂತ್ರಿ ಗಮನ ಸೆಳೆಯಲು ಕೃತ್ಯ
ವೃತ್ತಿಯಲ್ಲಿ ಕೂಲಿ ಕೆಲಸಗಾರರಾಗಿರುವ ಮುಖೇಶ್ ಪಟೇಲ್ ಹಾಗೂ ಆತನ ಪತ್ನಿ ನೇಹಾ ಪುತ್ರ ನರೇಶ್ನೊಂದಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಅಗವಹಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ತಮ್ಮ ಮಗುವಿನ ಜೀವ ಉಳಿಸುವ ಸಲುವಾಗಿ ಈ ರೀತಿ ಮಾಡಬೇಕಾಯಿತು. ವೇದಿಕೆ ಮೇಲೆ ಎಸೆದ ನನ್ನ ಮಗುವಿನ ಹೃದಯದಲ್ಲಿ ಒಂದು ಚಿಕ್ಕ ರಂದ್ರವಿದೆ ಅದರ ಚಿಕಿತ್ಸೆಗೆ ದುಡ್ಡು ಭರಿಸಲು ಆಗದೇ ಮುಖ್ಯಮಂತ್ರಿಗಳ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ಹೇಳಿದ್ದಾನೆ.
ಇದನ್ನೂ ಓದಿ: VIDEO| ನೋಡ ನೋಡುತ್ತಿದ್ದಂತೆ ಇಬ್ಬರನ್ನು ನುಂಗಿದ ನೀರಾನೆ!
ಸ್ಪಂದಿಸಿದ ಚೌಹಾಣ್
ಮಗು ವೇದಿಕೆ ಮೇಲೆ ಬಿದ್ದು ಅಳುತ್ತಿರುವುದನ್ನು ಗಮನಿಸಿದ ಚೌಹಾಣ್ ಒಂದು ಕ್ಷಣ ದಿಗ್ಭ್ರಮೆಗೊಂಡರು ಮತ್ತು ಪೋಷಕರನ್ನು ತಮ್ಮ ಬಳಿ ಕರೆಸಿಕೊಂಡು ಮಾಹಿತಿ ಪಡೆದರು.
ಕುಟುಂಬಸ್ಥರಿಂದ ಮಾಹಿತಿ ಪಡೆದ ಸಿಎಂ ಈ ರೀತಿ ಮಾಡದಂತೆ ಬುದ್ದಿವಾದ ಹೇಳಿ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಆಶ್ವಾಸನೆ ನೀಡಿದ್ಧಾರೆ. ವಿವರವನ್ನು ತಮ್ಮ ಕಚೇರಿ ಸಿಬ್ಬಂದಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ಧಾರೆ.