More

    ದೇವರು ಲ್ಯಾಂಬೊರ್ಗಿನಿ ಕಾರು ಕೊಡುತ್ತಾನೆ ಅಂತ ದಿನಗಟ್ಟಲೆ ಉಗ್ರ ಉಪವಾಸ ಮಾಡಿದ; ಎಲ್ಲ ಗರ್ಲ್​ಫ್ರೆಂಡ್​ಗಾಗಿ…

    ನವದೆಹಲಿ: ನಂಬಿಕೆಗೆ ಮಿತಿ ಇಲ್ಲ, ಆದರೆ ಮೂಢನಂಬಿಕೆಗೆ ಒಂದು ಮಿತಿ ಇದ್ದೇ ಇರುತ್ತದೆ. ಇಲ್ಲೊಬ್ಬ 40 ದಿನಗಳ ಕಾಲ ಹಗಲು-ರಾತ್ರಿ ಅನ್ನ-ನೀರು ತ್ಯಜಿಸಿದರೆ ದೇವರು ಲ್ಯಾಂಬೊರ್ಗಿನಿ ಕಾರು ಕೊಟ್ಟು ಬಿಡುತ್ತಾನೆ ಎಂದುಕೊಂಡು ಹಾಗೆ ಮಾಡಲು ಮುಂದಾಗಿದ್ದಾನೆ. ಕೊನೆಗೆ ಅನ್ನ-ನೀರು ಬಿಟ್ಟವನು ಪ್ರಾಣ ಬಿಡುವ ಹಂತಕ್ಕೆ ತಲುಪಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಜಿಂಬಾಬ್ವೆಯ ಬಿಂದುರ ಎಂಬಲ್ಲಿನ ಮಾರ್ಕ್​ ಮುರಾದಿರಾ ಎಂಬಾತ ನಿರುದ್ಯೋಗಿ. ಸಾಲದ್ದಕ್ಕೆ ಜತೆಗೊಬ್ಬಳು ಗರ್ಲ್​ಫ್ರೆಂಡ್. ಅವಳಿಗೆ ಸುಮಾರು 1.54 ಕೋಟಿ ರೂ. ಮೊತ್ತದ ಲ್ಯಾಂಬೊರ್ಗಿನಿ ಕಾರು ಉಡುಗೊರೆಯಾಗಿ ಕೊಟ್ಟು ಇಂಪ್ರೆಸ್​ ಮಾಡಬೇಕು ಎಂಬ ದುಬಾರಿ ಕನಸು. ಆದರೆ ಕೆಲಸವಿಲ್ಲದೆ ಅಂಥ ಐಷಾರಾಮಿ ಕಾರನ್ನು ಖರೀದಿಸುವುದ ಹೇಗೆ ಎಂಬ ಚಿಂತೆಯಲ್ಲಿದ್ದ ಇವನಿಗೆ ಇಂಥದ್ದೊಂದು ಐಡಿಯಾ ಯಾರು ಕೊಟ್ಟರೋ ಗೊತ್ತಿಲ್ಲ.

    ಅವನು 40 ದಿನಗಳ ಕಾಲ ಹಗಲು-ರಾತ್ರಿ ಆಹಾರ ತ್ಯಜಿಸಿ ಉಪವಾಸ ಮಾಡಿದರೆ ದೇವರು ಲ್ಯಾಂಬೊರ್ಗಿನಿ ಕಾರು ಕರುಣಿಸಿಬಿಡುತ್ತಾನೆ ಎಂದು ಭಾವಿಸಿದ್ದ. ನಗರ ಪ್ರದೇಶದಲ್ಲಿದ್ದರೆ ಉಪವಾಸಕ್ಕೆ ಭಂಗ ಬರುತ್ತದೆ ಎಂದುಕೊಂಡ ಆತ ಅದಕ್ಕಾಗಿ ಆಹಾರ ಸಿಗದ ಬೆಟ್ಟವೊಂದಕ್ಕೆ ಹೋಗಿದ್ದ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಕೆಲವು ದಿನಗಳಿಂದ ಕಾಣಿಸದ ಗೆಳೆಯ ಬೆಟ್ಟದ ಮೇಲಿರುವುದನ್ನು ಅದು ಹೇಗೋ ಪತ್ತೆ ಮಾಡಿದ ಸ್ನೇಹಿತರು, ಅನ್ನ-ನೀರು ಸಿಗದೆ ನಿತ್ರಾಣಗೊಂಡು ಸಾಯುವ ಸ್ಥಿತಿಯಲ್ಲಿದ್ದ ಆತನನ್ನು ಕೂಡಲೇ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಆತ 33 ದಿನಗಳ ಉಪವಾಸ ಮಾಡಿದ್ದ ಎನ್ನಲಾಗಿದೆ.

    ಗೆಳೆಯನ ಪರಿಸ್ಥಿತಿ ಕಂಡು ಸ್ನೇಹಿತರು ಲ್ಯಾಂಬೊರ್ಗಿನಿ ಕಾರ್​ಗಾಗಿ ಫಂಡ್​ರೈಸ್ ಮಾಡಿದರೂ ಸಂಗ್ರಹವಾಗಿದ್ದು ಬರೀ 3 ಸಾವಿರ ರೂಪಾಯಿ. ಕೊನೆಗೆ ಅದನ್ನು ಆಸ್ಪತ್ರೆ ಖರ್ಚಿಗೆ ಬಳಸಲಾಗಿದ್ದು, ಸದ್ಯ ಚಿಕಿತ್ಸೆಯಲ್ಲಿರುವ ಮಾರ್ಕ್​ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!

    ಅಮ್ಮನ ನಿದ್ದೆ ಕಸಿದ ಕರೊನಾ; ಮನೆಯಿಂದಲೂ ಕೆಲಸ, ಮನೆಯಲ್ಲೂ ಕೆಲಸ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts