ಪೆನಾಂಗ್: ಸಿಂಗಾಪೂರ್ನಲ್ಲಿ ವಾಸವಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬ ಅಲ್ಲಿನ ಛಾಂಗಿ ವಿಮಾನ ನಿಲ್ದಾಣದಲ್ಲಿರುವ ಹೋಟೆಲ್ ನೆಲಹಾಸಿನ ಮೇಲೆ ಉಗಿದಿದ್ದಲ್ಲದೆ, ಕರೊನಾ…ಕರೊನಾ ಎಂದು ಕೂಗಾಡಿದ್ದಕ್ಕೆ 2 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಜಾಸ್ವಿಂದ್ ಸಿಂಗ್ ಮೆಹರ್ ಸಿಂಗ್(52) ಬಂಧಿತ ಆರೋಪಿ. ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಉಂಟುಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.
ಮಾರ್ಚ್ 3ರ ಬೆಳಗ್ಗೆ 10:30ಕ್ಕೆ ರೆಸ್ಟೋರೆಂಟ್ಗೆ ತೆರಳಿದ ಸಿಂಗ್, ಹೋಟೆಲ್ ಸಿಬ್ಬಂದಿಗೂ ಮಾಹಿತಿ ನೀಡದೆ ಪ್ಲೇಟ್ ತೆಗೆದುಕೊಂಡು ತಿಂಡಿಯನ್ನು ಹಾಕಕೊಳ್ಳಲು ಮುಂದಾದರು. ಈ ವೇಳೆ ಹೋಟೆಲ್ ಮ್ಯಾನೇಜರ್ ವಿಕ್ರಮ್ ಓಂ ಪ್ರಕಾಶ್ ರಾವ್ ಕಕ್ರೋ ಸಿಂಗ್ಗೆ ಮಾರ್ಗದರ್ಶನ ಮಾಡಿ, ಸೀಟ್ನಲ್ಲಿ ಕೂರುವಂತೆ ಹೇಳಿ ಸೆಕ್ಯುರಿಟಿ ಮ್ಯಾನೇಜರ್ರೊಟ್ಟಿಗೆ ಫೋನ್ನಲ್ಲಿ ಬಿಜಿಯಾಗಿದ್ದರು.
ಇದೇ ಸಂದರ್ಭದಲ್ಲಿ ಸಿಂಗ್ ಮತ್ತೆ ಎದ್ದು ಬಂದು ಪ್ಲೇಟ್ಸ್ಗಳನ್ನು ಮುರಿದು ಹಾಕಿದ್ದಾರೆ. ಅದನ್ನು ವಿಕ್ರಮ್ ತಡೆದು ಸಿಂಗ್ರನ್ನು ಸೋಫಾ ಮೇಲೆ ಮತ್ತೆ ಕೂರಿಸಿದ್ದಾರೆ. ಆದರೆ, ಟೇಬಲ್ ಮೇಲೆ ಎರಡು ಕಾಲುಗಳನ್ನಿಟ್ಟಿದಲ್ಲದೆ, ಟೇಬಲ್ ಒದಿಯುವ ಮೂಲಕ ದರ್ಪ ಮೆರೆದಿದ್ದಾರೆ. ಎರಡು ಬಾರಿ ನೆಲಹಾಸಿನ ಮೇಲೆ ಉಗಿದಿದ್ದಲ್ಲದೆ, ಕರೊನಾ… ಕರೊನಾ ಎಂದು ಕೂಗಾಡಿದ್ದಾರೆ.
ಊಟ ಮುಗಿದಿದೆ ಎಂದು ವೇಟರ್ ಹೇಳಿದ್ದಕ್ಕೆ ಕೋಪಗೊಂಡ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಸದ್ಯ ಬಂಧನಕ್ಕೆ ಒಳಗಾಗಿರುವ ಸಿಂಗ್ 2 ತಿಂಗಳ ಜೈಲು ಶಿಕ್ಷೆಯೊಂದಿಗೆ ಭಾರಿ ದಂಡವನ್ನು ಕಟ್ಟಬೇಕಾಗಿದೆ. (ಏಜೆನ್ಸೀಸ್)
ವಿಡಿಯೋ ಸಂದೇಶ ಪ್ರಕಟಿಸಿದ್ರು ಪ್ರಧಾನಿ ನರೇಂದ್ರ ಮೋದಿ!: ಏಪ್ರಿಲ್ 5ರ ರಾತ್ರಿ 9ಕ್ಕೆ 9 ನಿಮಿಷ ನೀಡಿ..