ದೊಡ್ಡಬಳ್ಳಾಪುರ: ಇಲ್ಲೊಬ್ಬ ಪ್ರೇಮಿ ‘ಆ ಹುಡುಗಿ ನನ್ನ ಜೋಡಿ ಆಗುವಂತೆ ಮಾಡಪ್ಪಾ’ ಎಂದು ದೇವರಲ್ಲಿ ಬೇಡುವ ಬದಲು, ಕಾಣಿಕೆ ಹುಂಡಿಯಲ್ಲಿ ಚೀಟಿ ಹಾಕಿದ್ದಾನೆ.
ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಸ್ಥಾನದ ಹುಂಡಿಯಲ್ಲಿ ಈ ವಿಚಿತ್ರ ಪ್ರೇಮಪತ್ರ ಸಿಕ್ಕಿದೆ. ಪ್ರೇಮಿ, ಯುವತಿ ತನಗೆ ಸಿಗುವಂತೆ ಪ್ರೇಮ ಪತ್ರ ಬರೆದು ಹಾಕಿದ್ದಾನೆ. ಈ ಪ್ರೇಮಪತ್ರ ಹುಂಡಿ ಎಣಿಕೆ ವೇಳೆ ಸಿಕ್ಕಿದ್ದು ‘ರಾಜೇಶ್ಗೆ ‘ಈ ಹುಡುಗಿ’ ಜೋಡಿಯಾಗುವಂತೆ ಮಾಡಪ್ಪ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಪತ್ರದ ಇಂಕ್ ಕೆಂಪು ಬಣ್ಣದ್ದು ಆದ್ದರಿಂದ ಇದನ್ನು ಅಥವಾ ರಕ್ತದಲ್ಲಿ ಪತ್ರ ಬರೆಯಲಾಗಿದೆಯಾ ಎಂಬ ಶಂಕೆ ಎದುರಾಗಿದೆ.
ತಿಂಗಳ ಹುಂಡಿ ಎಣಿಕೆ ವೇಳೆ ಈ ಪತ್ರ ಸಿಕ್ಕ ಕಾರಣ ಇದನ್ನು ಜಾತ್ರೆ ಅಥವಾ ಹೊಸ ವರ್ಷದ ವೇಳೆ ಹುಂಡಿಗೆ ಹಾಕಲಾಗಿದೆ ಎಂದು ಊಹಿಸಲಾಗಿದೆ. ಅಂದಹಾಗೆ ಈ ವಿಚಿತ್ರ ಘಟನೆ ನಡೆದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ.