ಮೈಸೂರು: ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿದ್ದ ಜಗಳ ಒಬ್ಬರ ಕೊಲೆಯಲ್ಲಿ ಕೊನೆಗೊಂಡಿದ್ದು, ಮತ್ತೊಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಈ ಪ್ರಕರಣದಲ್ಲಿ ಸವಿತಾ ಎಂಬಾಕೆ ಸಾವಿಗೀಡಾಗಿದ್ದು, ಭಾರತಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕದಮನೆಯ ವ್ಯಕ್ತಿ ಗಿರೀಶ್ ಆರೋಪಿ.
ಇವರ ನಡುವೆ ಸುಮಾರು 15 ದಿನಗಳಿಂದ ಕ್ಷುಲಕ ಕಾರಣಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ಇಂದು ಕೂಡ ಸಣ್ಣಪುಟ್ಟ ವಿಚಾರಕ್ಕೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಗಿರೀಶ್ ಮಚ್ಚಿನಿಂದ ಹಲ್ಲೆ ಮಾಡಿದ್ದು, ಸವಿತಾ ಸಾವಿಗೀಡಾದರು. ಘಟನಾ ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ, ಇನ್ಸ್ಪೆಕ್ಟರ್ ರವಿ, ಸಬ್ ಇನ್ಸ್ಪೆಕ್ಟರ್ ಸುನೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಸಂಚಲನ; ಟೋಯಿಂಗ್ಗೆ ಸದ್ಯದಲ್ಲೇ ಹೊಸ ನಿಯಮ: ಏನೇನಿರುತ್ತೆ ಷರತ್ತು?
ಎಲ್ಲ ಪುರುಷರನ್ನೂ ಅತ್ಯಾಚಾರಿಗಳು ಎಂಬಂತೆ ನೋಡುವುದು ಸರಿಯಲ್ಲ: ಸಚಿವೆ ಸ್ಮೃತಿ ಇರಾನಿ
ಇವರು ಬ್ರ್ಯಾಂಡೆಡ್ ಕಳ್ಳರು: ನಾಲ್ವರಲ್ಲಿ ಒಬ್ಬನನ್ನು ಹಿಡಿದ ದಿಟ್ಟ ಸೆಕ್ಯುರಿಟಿ ಗಾರ್ಡ್ಸ್ಗೆ ಪೊಲೀಸರ ಮೆಚ್ಚುಗೆ