ನವದೆಹಲಿ: ವೈದ್ಯರನ್ನು ಮನುಷ್ಯ ರೂಪದ ದೇವರು ಎನ್ನಲಾಗುತ್ತದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಮಷಿನ್ಗೆ ಸಿಕ್ಕು, ಕೈಯನ್ನು ಎರಡು ತುಂಡು ಮಾಡಿಕೊಂಡಿದ್ದ ಕಾರ್ಮಿಕನೊಬ್ಬನಿಗೆ ವೈದ್ಯರು ನಿಜವಾದ ದೇವರಾದ ಘಟನೆ ನಡೆದಿದೆ.
ಪ್ರಹ್ಲಾದ್ಪುರದ ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಇಂದ್ರಪಾಲ್ (36) ಹೆಸರಿನ ಕಾರ್ಮಿಕ ಆಕಸ್ಮಿಕವಾಗಿ ಮಷಿನ್ ಬಾಯಿಗೆ ಸಿಕ್ಕಿದ್ದಾನೆ. ಆತ ಎಡಗೈ ಎರಡು ತುಂಡಾಗಿ, ಒಂದು ತುಂಡು ಮಷಿನ್ನ ಎಲ್ಲ ಭಾಗಗಳಿಗೂ ಹೋಗಿ ಬಂದಿದೆ. ಘಟನೆ ಕೇಳಿ ದಂಗಾದ ಕಾರ್ಖಾನೆಯ ಮಾಲೀಕ, ತಕ್ಷಣ ಇಂದ್ರಪಾಲ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ತುಂಡಾಗಿದ್ದ ಕೈಯನ್ನು ಪಾಲಿಥಾನ್ ಶೀಟ್ನಲ್ಲಿ ಸ್ವಚ್ಛತೆಯಿಂದ ತೆಗೆದುಕೊಂಡು ಹೋಗಿ ವೈದ್ಯರಿಗೆ ಕೊಡಲಾಗಿದೆ. ವೈದ್ಯರು ಆರು ತಾಸಿನ ಕಾಲ ಆಪರೇಷನ್ ನಡೆಸಿದ್ದು, ತುಂಡಾಗಿದ್ದ ಕೈಯನ್ನು ದೇಹಕ್ಕೆ ಸೇರಿಸಲಾಗಿದೆ. ಕೈ ಸಾಕಷ್ಟು ಪೆಟ್ಟು ತಿಂದಿದ್ದರಿಂದಾಗಿ ಅದರ ಕೆಲ ಭಾಗವನ್ನು ಕತ್ತರಿಸಲಾಗಿದ್ದು ಕೈ ಸುಮಾರು 7-8 ಇಂಚಿನಚ್ಟು ಚಿಕ್ಕದಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಇಂದ್ರಪಾಲ್ನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಈ ರೀತಿಯ ಕೇಸ್ನಲ್ಲಿ 3-4 ಗಂಟೆಯೊಳಗೆ ರೋಗಿ ಆಸ್ಪತ್ರೆ ಸೇರಿದರೆ ಆಪರೇಷನ್ ಮಾಡಬಹುದು. ಸೂಕ್ತ ಸಮಯಕ್ಕೆ ಆತ ಬಂದಿದ್ದರಿಂದಾಗಿ ಆತನ ಕೈಯನ್ನು ಸರಿಮಾಡಲು ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)
ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್ ಶಾಕ್! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?