ಮೈಸೂರು: ಜನ್ಮದಿನದ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಅದೇ ದಿನ ಸಾವಿನ ಸೂತಕ ಆವರಿಸಿದೆ. ಅತ್ಯಂತ ದುರದೃಷ್ಟಕರ ಎಂದರೆ, ಜನ್ಮದಿನದ ಸಂತೋಷದಲ್ಲಿದ್ದ ವ್ಯಕ್ತಿ ಅದೇ ದಿನ ಸಾವಿಗೀಡಾಗಿದ್ದಾನೆ. ಮೈಸೂರಿನ ತಿ. ನರಸೀಪುರ ತಾಲೂಕಿನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ಮೂಗೂರು ನಿವಾಸಿ ಮನು (28) ಜನ್ಮದಿನದಂದೇ ಸಾವಿಗೀಡಾದ ವ್ಯಕ್ತಿ. ತನ್ನ ಹುಟ್ಟುಹಬ್ಬದ ಪ್ರಯುಕ್ತ ಇಂದು ತಮ್ಮನ ಮನೆಗೆ ಸಿಹಿ ವಿತರಿಸಲು ಮನು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬೈಕ್ನಲ್ಲಿ ತಿ.ನರಸೀಪುರ ತಾಲೂಕಿನ ಹಳೇ ಕೆಂಪಯ್ಯನ ಹುಂಡಿ ಬಳಿ ಹೋಗುತ್ತಿದ್ದಾಗ ಮನು ತಲೆ ಮೇಲೇ ಮರ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡ ಮನು ಸ್ಥಳದಲ್ಲೇ ಸಾವಿಗೀಡಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ತಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಸ್ಕರ್ ಪ್ರಶಸ್ತಿ 2022: ಚೊಚ್ಚಲ ಆಸ್ಕರ್ ಪ್ರಶಸ್ತಿ ಗೆದ್ದ ನಟ ವಿಲ್ ಸ್ಮಿತ್, ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ…