More

    ಪತ್ನಿ ಬಿಟ್ಟು ಹೋದಳೆಂದು ಮಕ್ಕಳಿಬ್ಬರಿಗೆ ವಿಷವುಣಿಸಿ ಆತ್ಮಹತ್ಯೆ ಶರಣಾದ ವ್ಯಕ್ತಿ

    ಚಿಕ್ಕೋಡಿ: ಪತ್ನಿ ಬಿಟ್ಟು ಹೋದಳು ಎಂದು ಎಳೆ ಕಂದಮ್ಮಗಳಿಗೆ ತಂದೆ ವಿಷ ಉಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗೂಡ ಗ್ರಾಮದಲ್ಲಿ ನಡೆದಿದೆ.

    ತಂದೆ ತಮ್ಮಣ್ಣಾ ಗಿಡ್ಡಾಳೆ(38) ಮಕ್ಕಳಾದ ಚಿನ್ನು ಗಿಡ್ಡಾಳೆ (2) ಹಾಗೂ ನಿರಂಜನ್​ ಗಿಡ್ಡಾಳೆ (10) ಮೃತರು. ಇಬ್ಬರು ಮಕ್ಕಳೊಂದಿಗೆ ನನ್ನನ್ನು ಬಿಟ್ಟು ಹೋದಳಲ್ಲ ಎಂಬ ಬೇಸರದಿಂದ ತಮ್ಮಣ್ಣಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಅಕ್ರಮ ಚಟುವಟಿಕೆ ಹಿನ್ನೆಲೆ ಬಹುಭಾಷಾ ನಟ ಶ್ಯಾಮ್​ ಬಂಧನ: ಮತ್ತಷ್ಟು ಕಲಾವಿದರಿಗೆ ಬಂಧನ ಭೀತಿ

    ವಿಷ ಉಣಿಸಿ ಅಕ್ಕ-ಪಕ್ಕದಲ್ಲೆ ಮಕ್ಕಳನ್ನು ಮಲಸಿಕೊಂಡು ತಂದೆ ಪ್ರಾಣ ಬಿಟ್ಟಿರುವುದು ಹೃದಯವಿದ್ರಾವಕವಾಗಿದೆ. ಬಾಳಿ ಬದುಕದ ಕಂದಮ್ಮಗಳು ಜಗತ್ತಿನ ವಾಸ್ತವ ಅರಿಯುವ ಮುನ್ನವೇ ಇಹಲೋಕ ತ್ಯಜಿಸಿದ್ದನ್ನು ನೋಡಿ ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ.

    ಸ್ಥಳಕ್ಕೆ ಹುಕ್ಕೇರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಲಾಕ್​ಡೌನ್​ ಎಫೆಕ್ಟ್, ವಾಟ್ಸ್ಆ್ಯಪ್ ವಿಡಿಯೋ ಕಾಲ್​ ಮೂಲಕ ಸಹಜ ಹೆರಿಗೆ ಮಾಡಿದ ಸ್ಥಳೀಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts