ಕೊವಿಡ್-19 ಶುರುವಾದ ಮೇಲೆ ಹೆಣದ ಹತ್ತಿರ ಹೋಗಲೂ ಜನರು ಭಯಪಡುತ್ತಿದ್ದಾರೆ. ಬೇರೆ ಕಾರಣದಿಂದ ಸತ್ತರೂ ಕೊವಿಡ್-19 ಇರಬಹುದಾ ಎಂಬ ಅನುಮಾನವೇ ಕಾಡುತ್ತದೆ. ಅದರಲ್ಲೂ ಯಾರಾದರೂ ಸಾರ್ವಜನಿಕ ಸ್ಥಳದಲ್ಲೇ ಮೃತಪಟ್ಟರೆ, ಅವರೆಡೆಗೆ ಜನರು ತಿರುಗಿ ಕೂಡ ನೋಡದೆ ಇರುವ ಘಟನೆಗಳೂ ಮೇಲಿಂದ ಮೇಲೆ ನಡೆಯುತ್ತಲೇ ಇವೆ.
ಇದೀಗ ಬಿಹಾರದಲ್ಲೂ ಕೂಡ ಅಂಥದ್ದೇ ಮನಕಲಕುವ ಘಟನೆ ನಡೆದಿದೆ. ಭಗಲ್ಪುರದ ನಿವಾಸಿಯೋರ್ವ ಔಷಧಿ ತೆಗೆದುಕೊಳ್ಳಲು ಮೆಡಿಕಲ್ ಶಾಪ್ಗೆ ತೆರಳಿದ್ದರು. ಆದರೆ ಅದೇನಾಯಿತೋ ಔಷಧಿ ಅಂಗಡಿ ಎದುರೇ ಕುಸಿದು, ಮೃತಪಟ್ಟರು.
ಆದರೆ ದುರಂತವೆಂದರೆ ಅಲ್ಯಾರೂ ಅವರ ಹತ್ತಿರ ಕೂಡ ಹೋಗಲಿಲ್ಲ. ಸಹಾಯ ಮಾಡಲಿಲ್ಲ. ಆರು ತಾಸು ಮೃತದೇಹ ಅಲ್ಲಿಯೇ ಇದ್ದರೂ ಒಬ್ಬರೂ ಕಣ್ಣೆತ್ತಿ ಕೂಡ ನೋಡಲಿಲ್ಲ. ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ: ಕರಣ್ ಜೋಹರ್ ವಿಚಾರಣೆಯೂ ಇಲ್ಲ!
ಈ ವ್ಯಕ್ತಿ ಅಸ್ತಮಾ ಪಂಪ್ ತೆಗೆದುಕೊಳ್ಳಲು ಬಂದಿದ್ದರು. ಅದನ್ನು ಖರೀದಿಸಿ ಹೊರಗೆ ಹೋಗುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಔಷಧಿ ಅಂಗಡಿ ಮಾಲೀಕ ತಿಳಿಸಿದ್ದಾರೆ.
ಇದೀಗ ಕರೊನಾ ವೈರಸ್ ಇರುವುದರಿಂದ ನಮಗೆ ಹತ್ತಿರ ಹೋಗಲು ಭಯವಾಯಿತು. ಕೂಡಲೇ ಪೊಲೀಸ್ ಹಾಗೂ ಕೊವಿಡ್-19 ಹೆಲ್ಪ್ಸೆಂಟರ್ಗೆ ಕರೆ ಮಾಡಿದೆವು. ಆದರೆ ಅವರೂ ಕೂಡ ಬೇಗ ಬರಲಿಲ್ಲ ಎಂದವರು ಹೇಳಿದ್ದಾರೆ. ಇದನ್ನೂ ಓದಿ: ಸಾಲು ಸಾಲು ವೆಬ್ಸಿರೀಸ್ ಮತ್ತು ಸಿನಿಮಾಗಳನ್ನು ಘೋಷಣೆ ಮಾಡಿದ ನೆಟ್ಫ್ಲಿಕ್ಸ್ ಇಂಡಿಯಾ
ಕೊನೆಗೆ ಸ್ಥಳೀಯ ಡೆಪ್ಯೂಟಿ ಮೇಯರ್ಗೆ ಕರೆ ಮಾಡಿದ ಬಳಿಕ ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಬಂದು ಮೃತದೇಹವನ್ನು ಅಲ್ಲಿಂದ ಎತ್ತಿದ್ದಾರೆ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.(ಏಜೆನ್ಸೀಸ್)
PHOTOS: ನಟಿ ರಮ್ಯಾರ ಸೊಟ್ಟ ಮುಖ ನೋಡಿ ಕಂಗಾಲಾದ ನೆಟ್ಟಿಗರು; ಯಾಕೀ ಹುಚ್ಚಾಟ ಎಂದು ಕೇಳುತ್ತಿದ್ದಾರೆ ಅಭಿಮಾನಿಗಳು !