More

    ಕುಲದೇವತೆಗಾಗಿ ಪತ್ನಿಯ ಶಿರಚ್ಛೇದ ಮಾಡಿದ ಭೂಪ; ಪುತ್ರರಿಂದಲೇ ಬಯಲಾಯ್ತು ಸತ್ಯ

    ಸಿಂಗ್ರೌಲಿ: 50 ವರ್ಷದ ವ್ಯಕ್ತಿ ತನ್ನ ಪತ್ನಿಯ ಶಿರಚ್ಛೇದ ಮಾಡಿ, ರುಂಡವನ್ನೊಂದು ಕಡೆ…ದೇಹವನ್ನೊಂದು ಕಡೆ ಹೂತಿಟ್ಟ ಭಯಾನಕ ಘಟನೆ ಸಿಂಗ್ರೌಲಿಯಲ್ಲಿ ನಡೆದಿದೆ.

    ಈತ ಕುಲದೇವತೆಯ ಸಂತೃಪ್ತಿ ಪಡಿಸಲು ಮಾನವ ಬಲಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
    ಬಸೌಡಾ ಗ್ರಾಮದ ಈ ವ್ಯಕ್ತಿಯ ಭೀಕರತೆಯನ್ನು ಆತನ ಪುತ್ರರೇ ಪೊಲೀಸರಿಗೆ ತಿಳಿಸಿದ್ದಾರೆ. ಹಾಗೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಎಸ್​​ಪಿ ಪ್ರದೀಪ್​ ಶಿಂಧೆ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ರಾಜನಾಥ್​ ಸಿಂಗ್​: ಶೇಕ್​ ಹ್ಯಾಂಡ್​ ಮಾಡಲು ಬಂದ ಅಧಿಕಾರಿಗೆ ಕೈ ಜೋಡಿಸಿ ಟ್ರೆಂಡ್ ಆದರು..!

    ಈ ವ್ಯಕ್ತಿ ಮೂಢನಂಬಿಕೆಗಳ ದಾಸನಾಗಿದ್ದ. ಒಂದಲ್ಲ ಒಂದು ಪೂಜೆ ಮಾಡುತ್ತಿದ್ದ. ಒಂದು ಪೂಜಾಕೋಣೆಯನ್ನೇ ಸಿದ್ಧ ಮಾಡಿಕೊಂಡಿದ್ದ. ಇಷ್ಟು ದಿನ ಕುರಿಗಳ ಬಲಿಯನ್ನೂ ಕೊಟ್ಟಿದ್ದ. ಆದರೆ ಈಗ ಪತ್ನಿಯ ರುಂಡವನ್ನೇ ಕಡಿದಿದ್ದಾನೆ ಎಂದು ಪುತ್ರರು ಮಾಹಿತಿ ನೀಡಿದ್ದಾರೆ. ತನ್ನ ಪತ್ನಿಯನ್ನು ಬಲಿ ಕೊಟ್ಟ ಬಳಿಕ ಅವಳ ಶಿರ ಮತ್ತು ದೇಹದ ಭಾಗವನ್ನು ಪ್ರತ್ಯೇಕವಾಗಿ ಪೂಜಾ ಕೋಣೆಯಲ್ಲೇ ಸಮಾಧಿ ಮಾಡಿದ್ದಾನೆ ಎಂದೂ ಗೊತ್ತಾಗಿದೆ. (ಏಜೆನ್ಸೀಸ್​)

    ಅಮ್ಮ, ಅಣ್ಣನನ್ನು ಕೊಂದ ಬಾಲಕಿ; ಮೊದಲು ವಾಶ್​ ರೂಂನಲ್ಲಿ ಮಾಡಿದ್ದೇನು? ಬೆಚ್ಚಿ ಬೀಳಿಸುವ ಡಬಲ್​ ಮರ್ಡರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts