ಕೋಲ್ಕತ: ಪಶ್ಚಿಮ ಬಂಗಾಳದ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಆದರೆ ಬಸವಳಿಯದ ಅವರು ಚುನಾವಣಾ ಪ್ರಚಾರಕ್ಕೆ ವೀಲ್ಚೇರ್ನಲ್ಲೇ ಬರುವುದಾಗಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಕೋಲ್ಕತದ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಮತಾ ಬ್ಯಾನರ್ಜಿ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ತಾಳ್ಮೆ ಕಳೆದುಕೊಂಡು, ಸಾರ್ವಜನಿಕರಿಗೆ ಹಾನಿಯಾಗುವಂತಹ ಕೆಲಸ ಮಾಡಬಾರದು. ಶಾಂತವಾಗಿರಿ. ನಾನು ಇನ್ನು ಎರಡು ಮೂರು ದಿನಗಳಲ್ಲಿ ಪ್ರಚಾರಕ್ಕೆ ವಾಪಾಸಾಗುತ್ತೇನೆ. ಕೆಲ ದಿನಗಳ ಕಾಲ ವೀಲ್ ಚೇರ್ ಮೇಲೆ ಕುಳಿತೇ ಪ್ರಚಾರ ಮಾಡಬೇಕಾಗಬಹುದು. ಆದರೆ ನಾನು ಯಾವುದೇ ಸಭೆಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಮಮತಾ ಅವರ ಎಡ ಪಾದ, ಕಾಲಿನ ಮೂಳೆ ಮುರಿದಿರುವುದಾಗಿ ಹೇಳಲಾಗಿದೆ. ಕತ್ತಿನ ಭಾಗದಲ್ಲೂ ಸ್ವಲ್ಪ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಮಾಡೆಲಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಯುವತಿಯ ಬಾಯ್ಫ್ರೆಂಡ್ ಸೇರಿ ಮೂವರ ಬಂಧನ
ರಿಯಾಲಿಟಿ ಶೋ ಸ್ಪರ್ಧಿಯನ್ನು ಡೇಟ್ಗೆ ಕರೆದ ಜಾನ್ವಿ ಕಪೂರ್! ಅಂತದ್ದೇನಾಯ್ತು ಗೊತ್ತಾ?