More

    ಕನ್ಯಕಾ ಪರಮೇಶ್ವರಿ ಆತ್ಮಾರ್ಪಣೆ ದಿನಾಚರಣೆ

    ಗಂಗಾವತಿ: ನಗರದ ಹಿರೇಜಂತಕಲ್ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಸಮಾಜದಿಂದ ಕನ್ಯಕಾ ಪರಮೇಶ್ವರಿ ಆತ್ಮಾರ್ಪಣೆ ದಿನ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

    ಬೆಳಗ್ಗೆ ದೇವರ ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ, ಹೋಮ, ಪುರೋಹಿತರಾದ ಭೀಮಸೇನ್ ಭಟ್ ಜೋಶಿ ಮತ್ತು ಶ್ರೀಧರ್ ನೇತೃತ್ವದಲ್ಲಿ ಜರುಗಿದವು. ಮಾಲಾಧಾರಿಗಳಿಂದ ಇರುಮುಡಿ ಮೆರವಣಿಗೆ, ವಿಶೇಷ ಪೂಜೆ, ಮಹಿಳಾ ಮಂಡಳಿಯಿಂದ ಪಾರಾಯಣ, ಅನ್ನಸಂತರ್ಪಣೆ ಸೇವೆ ನೇರವೇರಿದವು. ನಗರೇಶ್ವರ ದೇವಾಲಯದಿಂದ ಕನ್ಯಕಾಪರಮೇಶ್ವರಿ ದೇವಾಲಯದವರೆಗೆ ಭಾವಚಿತ್ರ ಮೆರವಣಿಗೆ ಜರುಗಿತು. ಆರ್ಯವೈಶ್ಯ ಸಮಾಜದ ಹಿರೇಜಂತಕಲ್ ಘಟಕದ ಅಧ್ಯಕ್ಷ ನಾಗರಾಜ್ ದರೋಜಿ, ಸಮಾಜದ ಹಿರೇಜಂತಕಲ್ ಘಟಕದ ಪದಾಧಿಕಾರಿಗಳಿದ್ದರು.

    ಶ್ರೀರಾಮನಗರ: ತಾಲೂಕಿನ ಶ್ರೀರಾಮನಗರದ 3ನೇ ವಾರ್ಡ್‌ನ ವಾಸವಿ ನಗರದಲ್ಲೂ ಶ್ರೀ ಕನ್ಯಕಾಪರಮೇಶ್ವರಿ ದೇವಿ ಆತ್ಮಾರ್ಪಣೆ ದಿನ ಆಚರಿಸಲಾಯಿತು. ಭಾವಚಿತ್ರಕ್ಕೆ ವಿಶೇಷ ಪೂಜೆ, ಹೂವಿನ ಅಲಂಕಾರ, ಕಲಶ ಸ್ಥಾಪನೆ, ಮಹಿಳಾ ಮಂಡಳಿಯಿಂದ ಭಜನೆ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

    ಆರ್ಯವೈಶ್ಯ ಸಮಾಜದ ಪ್ರಮುಖರಾದ ಎಸ್.ವೆಂಕಟರತ್ನಂ, ಸಮಾಜದ ಅಧ್ಯಕ್ಷ ಎಂ.ಪ್ರಸಾದರಾವ್, ಕೆ.ದುರ್ಗಾರಾವ್, ಎನ್.ಲಕ್ಷ್ಮೀನಾರಾಯಣ, ಮೋಹನ, ಶ್ರೀನಿವಾಸ, ರಮೇಶ, ಪಿ.ರಾಘವೇಂದ್ರ, ಎಚ್.ನಾಗರಾಜ್, ವಿ.ವೆಂಕಟೇಶ್ವರರಾವ್, ಎನ್.ವಿ.ವಿ.ಸತ್ಯನಾರಾಯಣ, ಮಹಿಳಾ ಭಜನಾ ಮಂಡಳಿ ಪದಾಧಿಕಾರಿಗಳಾದ ಎಸ್.ರಾಧಾಕೃಷ್ಣ, ಕೆ.ರಾಮತುಳಸಿ, ಎಂ.ಲಕ್ಷ್ಮೀ, ಕೆ.ವಿಜಯಲಕ್ಷ್ಮೀ, ಕೆ.ಸೂರ್ಯವತಿ, ಶಾಂತಕುಮಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts