More

    ಸಿಎಂ ಯೋಗಿ ಆದಿತ್ಯನಾಥ್​ರನ್ನು ಬಾಂಬ್​ ಸ್ಪೋಟಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    ಮುಂಬೈ: ಬಾಂಬ್​ ಸ್ಪೋಟಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್​ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್​) ಬಂಧಿಸಿದೆ.

    ಇದನ್ನೂ ಓದಿ: ಭೂಗತ ಪಾತಕಿ ರವಿ ಪೂಜಾರಿಗೆ ಶಾಕ್​ ನೀಡಲು ಇಡಿ ಸಿದ್ಧತೆ

    ಬಂಧಿತನನ್ನು ಕಮ್ರಾನ್​ ಅಮೀನ್​ ಖಾನ್​ (25) ಎಂದು ಗುರುತಿಸಲಾಗಿದೆ. ಆರೋಪಿ ಖಾನ್​, ವಾಟ್ಸ್​ಆ್ಯಪ್​ ಮೂಲಕ ಉತ್ತರ ಪ್ರದೇಶ ರಾಜಧಾನಿ ಲಖನೌದ ಪೊಲೀಸ್​ ಮುಖ್ಯ ಕಚೇರಿಯ ಸಾಮಾಜಿಕ ಜಾಲತಾಣ ಸಹಾಯವಾಣಿಗೆ ಬೆದರಿಕೆ ಸಂದೇಶ ರವಾನಿಸಿದ್ದ. ಸಮುದಾಯವೊಂದನ್ನು ಗುರಿಯಾಗಿಸುತ್ತಿರುವ ಸಿಎಂ ಯೋಗಿಯನ್ನು ಬಾಂಬ್ ಸ್ಪೋಟಿಸಿ ಕೊಲ್ಲುತ್ತೇನೆ ಎಂದು ಬರೆದಿದ್ದ.

    ಈ ಸಂಬಂಧ ಉತ್ತರ ಪ್ರದೇಶದ ಪೊಲೀಸರು ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಐಟಿ ಕಾಯ್ದೆ ಅನ್ವಯ ಸಂಬಂಧಿತ ಸೆಕ್ಷನ್​ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದರು. ಉತ್ತರ ಪ್ರದೇಶದ ಸ್ಪೆಷಲ್​ ಟಾಸ್ಕ್​ ಫೋರ್ಸ್​ ಒಂದು ಆರೋಪಿಯ ಜಾಲವನ್ನು ಪತ್ತೆ ಹಚ್ಚಲು ಆರಂಭಿಸಿತು. ಸಂದೇಶ ಬಂದ ನಂಬರ್​ ಅನ್ನು ಮಹಾರಾಷ್ಟ್ರ ಎಟಿಎಸ್​​ ಸಹಕಾರದೊಂದಿಗೆ ಹುಡುಕಾಡಿದಾಗ ಆರೋಪಿ ಖಾನ್​ ಮುಂಬೈನ ಛುನಭಟ್ಟಿ ಏರಿಯಾದಲ್ಲಿ ಸಿಕ್ಕಿಬಿದ್ದಿದ್ದಾನೆ.

    ಇದನ್ನೂ ಓದಿ: ಪ್ರೀತಿಸುವ ಸೋಗಿನಲ್ಲಿ ವಿವಾಹಿತನಿಂದ ಯುವತಿಗೆ 8.48 ಲಕ್ಷ ರೂ. ವಂಚನೆ

    ಆರೋಪಿಯನ್ನು ಉತ್ತರ ಪ್ರದೇಶದ ಎಸ್​ಟಿಎಫ್​ ವಶಕ್ಕೆ ಒಪ್ಪಿಸಲಾಗಿದ್ದು, ಭಾನುವಾರ ಆರೋಪಿಯನ್ನು ಮುಂಬೈ ಕೋರ್ಟ್​ ಮುಂದೆ ಹಾಜರುಪಡಿಸಿ, ನಂತರ ಮುಂದಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ. (ಏಜೆನ್ಸೀಸ್​)

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಕೊಲೆ ಬೆದರಿಕೆ- ಪ್ರಕರಣ ದಾಖಲಿಸಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts