More

    ಲೈಕಾ ಪ್ರೊಡಕ್ಷನ್ಸ್​ ನಿರ್ಮಾಣದ ಚಿತ್ರದಲ್ಲಿ ಸುದೀಪ್​ ಅಭಿನಯ?

    ಬೆಂಗಳೂರು: ಸುದೀಪ್​ ಅಭಿನಯದ ‘ವಿಕ್ರಾಂತ್​ ರೋಣ’ ಚಿತ್ರವು ಬಿಡುಗಡೆಯಾಗಿ ಐದು ತಿಂಗಳುಗಳಾಗಿವೆ. ಈ ಚಿತ್ರದ ನಂತರ ಸುದೀಪ್​ ಯಾವೊಂದು ಹೊಸ ಚಿತ್ರವನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಈಗ ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್​ ಸುದೀಪ್​ ಅಭಿನಯದಲ್ಲಿ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ.

    ಇದನ್ನೂ ಓದಿ: ವಿದೇಶದಲ್ಲೂ ಜೋರಾಗಿದೆ ‘ವಿಜಯಾನಂದ’ ಚಿತ್ರದ ಹವಾ!

    ‘ವಿಕ್ರಾಂತ್​ ರೋಣ’ ನಂತರ ಸುದೀಪ್​, ಅನೂಪ್​ ಭಂಡಾರಿ ನಿರ್ದೇಶನದಲ್ಲಿ ‘ಬಿಲ್ಲ ರಂಗ ಭಾಷಾ’ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಸುದೀಪ್​ ಸಹ ‘ವಿಕ್ರಾಂತ್​ ರೋಣ’ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಆ ಚಿತ್ರ ಶುರುವಾಗುತ್ತದೆ ಎಂದು ಹೇಳಿದ್ದರು. ಆದರೆ, ‘ವಿಕ್ರಾಂತ್​ ರೋಣ’ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿರುವ ಹಿನ್ನೆಲೆಯಲ್ಲಿ, ಸುದೀಪ್​ ಆ ಚಿತ್ರವನನ್ನು ಕೈಬಿಟ್ಟಿರುವ ಸುದ್ದಿ ಇದೆ. ಈ ಮಧ್ಯೆ, ಹೊಂಬಾಳೆ ಫಿಲಂಸ್​ ನಿರ್ಮಾಣದ ಒಂದು ಚಿತ್ರದಲ್ಲಿ, ವೆಂಕಟ್​ ಪ್ರಭು ನಿರ್ದೇಶನದ ಒಂದು ಚಿತ್ರದಲ್ಲಿ ಸುದೀಪ್​ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.

    ಇದೀಗ ಬಂದಿರುವ ಸುದ್ದಿಯ ಪ್ರಕಾರ, ಲೈಕಾ ಸಂಸ್ಥೆಯ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸುದೀಪ್​ ಒಪ್ಪಿಕೊಂಡಿದ್ದಾರಂತೆ. ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು ತಮಿಳಿನಲ್ಲಿ ‘ಎಂದಿರನ್​’, ‘ಕಪ್ಪಾನ್​’, ‘ದರ್ಬಾರ್​’, ‘ಪೊನ್ನಿಯನ್​ ಸೆಲ್ವನ್​’, ‘ಇಂಡಿಯನ್​ 2’ ಮುಂತಾದ ದೊಡ್ಡ ಚಿತ್ರಗಳನ್ನು ನಿರ್ಮಿಸುತ್ತಿದ್ದು, ಸುದೀಪ್​ ಅಭಿನಯದ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿರುವ ಸುದ್ದಿ ಇದೆ.

    ಇದನ್ನೂ ಓದಿ: 14 ವರ್ಷಗಳ ನಂತರ ಜತೆಯಾಗಿ ನಟಿಸುತ್ತಿದ್ದಾರೆ ವಿಜಯ್​-ತ್ರಿಷಾ!

    ಆದರೆ, ಈ ವಿಷಯವಾಗಿ ಸುದೀಪ್​ ಆಗಲೀ, ಲೈಕಾ ಸಂಸ್ಥೆಯ ಕಡೆಯಿಂದ ಯಾವುದೇ ಘೋಷಣೆಯಾಗಿಲ್ಲ. ಹಾಗಂತ ಸುಳ್ಳು ಎಂದು ಹೇಳಲೂ ಸಾಧ್ಯವಿಲ್ಲ. ಏಕೆಂದರೆ, ‘ವಿಕ್ರಾಂತ್ ರೋಣ’ ಚಿತ್ರದ ನಂತರ ಸುದೀಪ್​ ದೊಡ್ಡ ಸಿನಿಮಾವೊಂದರ ಮೂಲಕ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಚಿತ್ರ ಲೈಕಾ ಪ್ರೊಡಕ್ಷನ್ಸ್​ ನಿರ್ಮಿಸುತ್ತಿರುವ ಸಾಧ್ಯತೆ ಇದೆ. ಹಾಗಾಗಿ, ಇದು ನಿಜ, ಸುಳ್ಳು ಎಂದು ಈಗಲೇ ತೀರ್ಮಾನಕ್ಕೆ ಬರುವುದು ಕಷ್ಟ.

    ಛತ್ರಪತಿ ಶಿವಾಜಿಯಾಗಿ ಅಕ್ಷಯ್​ ಕುಮಾರ್​ ಹೀಗೆ ಕಾಣ್ತಾರೆ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts