More

    ಇನ್ಸ್​ಟಾಗ್ರಾಂನಲ್ಲಿ ಅರಳಿತ್ತು ತ್ರಿಕೋನ ಪ್ರೇಮ ಕಥೆ; ಯುವಕನ ಬರ್ಬರ ಹತ್ಯೆ

    ನವದೆಹಲಿ: ಇನ್ಸ್​ಟಾಗ್ರಾಂನಲ್ಲಿ ಶುರುವಾದ ತ್ರಿಕೋನ ಪ್ರೇಮಕಥೆ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಪಹರ್‌ಗಂಜ್‌ನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಮಹಿರ್​ (20) ಎಂದು ಗುರುತಿಸಲಾಗಿದ್ದು, ಆರೋಪಿಗಳಾದ ಅರ್ಮಾನ್‌, ಫೈಸಲ್ ಮತ್ತು ಸಮೀರ್​ ತಲೆಮಾರಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಖಾನ್​ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈತ ಮಾಹಿರ್​ಗೆ 50ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ.

    ಪ್ರಕರಣದ ಹಿನ್ನಲೆ

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ದೆಹಲಿಯ ಪಹರ್‌ಗಂಜ್‌ನಲ್ಲಿರುವ ಫ್ಲೆಕ್ಸ್ ಪ್ರಿಂಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ 20 ವರ್ಷದ ಯುವತಿಯೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿದ್ದರು. ಇಬ್ಬರ ನಡುವಿನ ಸ್ನೇಹವು ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಅರ್ಮಾನ್‌ಗೆ ಸಿಟ್ಟು ತರಿಸಿದೆ.

    ಇದನ್ನೂ ಓದಿ: ಮನಮೋಹನ್ ಸಿಂಗ್ ಸಂವೇದನಾಶೀಲ ಪ್ರಧಾನಿಯಾಗಿದ್ದರು, ಆದರೆ ಈಗ: ಶರದ್​ ಪವಾರ್​

    ಒಮ್ಮೆ ವಿಡಿಯೋ ಕರೆಯಲ್ಲಿ ಇಬ್ಬರನ್ನು ಕಂಡು ಕೋಪಗೊಂಡ ಅರ್ಮಾನ್​, ಮಹಿಳೆಯ ಫೋನ್ ಕಿತ್ತುಕೊಂಡು, ಮಾಹಿರ್​ನನ್ನು ಭೇಟಿಯಾಗದಂತೆ ತಾಕೀತು ಮಾಡಿದ್ದ. ಬಳಿಕ ಇದೇ ವಿಚಾರವಾಗಿ ಗಲಾಟೆ ನಡೆದಿದ್ದು, ಆರೋಪಿ ಅರ್ಮಾನ್​ ತನ್ನ ಸ್ನೇಹಿತರ ಜತೆಗೂಡಿ ಮಹಿರ್​ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

    ರಸ್ತೆ ಬದಿ ಶವವನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್​​​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts