ಹೈದರಾಬಾದ್: ಪ್ರೀತಿ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ತಂದೂರ್ ಮಂಡಲದ ಮಾಲ್ ರೆಡ್ಡಿ ಪಲ್ಲಿಯಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟರೆ, ಯುವಕನ ಸ್ಥಿತಿ ಗಂಭೀರವಾಗಿದೆ.
ನಂ. 4ರಂದು ಘಟನೆ ನಡೆದಿದೆ. ಕೀರ್ತನಾ ಮೃತ ದುರ್ದೈವಿ. ಬಾಲರಾಜ್ ಮತ್ತು ಕೀರ್ತನಾ ಅನೇಕ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ವಿಚಾರ ಮನೆಗೆ ತಿಳಿದಿರಲಿಲ್ಲ. ಹೀಗಿರುವಾಗ ಇಬ್ಬರ ವಿಚಾರ ಮನೆಯವರಿಗೆ ತಿಳಿದಿದ್ದೆ. ಮದುವೆ ಒಪ್ಪುವುದಿಲ್ಲ ಎಂಬ ಬೇಸರದಿಂದ ಇಬ್ಬರು ತಮ್ಮ ಮನೆಗಳಲ್ಲಿ ಕೀಟನಾಶಕ ಸೇವಿಸಿದ್ದಾರೆ.
ಅಸ್ವಸ್ಥಗೊಂಡು ಒದ್ಡಾಡುತ್ತಿದ್ದ ಇಬ್ಬರನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೀರ್ತನಾ ಮೃತಪಟ್ಟರೆ, ಬಾಲರಾಜ್ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ರೈತರು ಸುಳ್ಳನ್ನು ನಂಬಬಾರದು ಎಂದು ಕೋರಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್
ಕೀರ್ತನಾಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)