More

    ಸ್ಮಶಾನದ ಬಳಿ ಲಂಚ ಪಡೆಯುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

    ಶಿವಮೊಗ್ಗ: ಸ್ಮಶಾನದ ಅಭಿವೃದ್ಧಿ ಸಂಬಂಧ ಬಾಕಿ ಹಣ ಬಿಡುಗಡೆಗೆ ಶಿವಮೊಗ್ಗ ತಾಲೂಕಿನ ಬುಕ್ಲಾಪುರ ಗ್ರಾಮದ ಸ್ಮಶಾನವೊಂದರ ಬಳಿ ಶುಕ್ರವಾರ ಗುತ್ತಿಗೆದಾರನಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಶಿವಮೊಗ್ಗ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಗೋಪಿನಾಥ್ ಬಂಧಿತ ಅಧಿಕಾರಿ. ದೂರುದಾರ ತಾಲೂಕಿನ ಕಾಟಿಕೆರೆ ಗ್ರಾಮದ ಉಪ ಗುತ್ತಿಗೆದಾರ ಜಿ. ರವಿಕುಮಾರ್ ಎಂಬುವರು ರಾಮಿನಕೊಪ್ಪ ಹಾಗೂ ಬುಕ್ಲಾಪುರ ಸ್ಮಶಾನ ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದ್ದರು. ಬುಕ್ಲಾಪುರ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ. ಮಂಜೂರಾಗಬೇಕಾಗಿತ್ತು.
    ಈ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರವಿಕುಮಾರ್ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಿನಾಥ್ ಅವರಿಗೆ ಮನವಿ ಮಾಡಿದ್ದರು. 15 ಸಾವಿರ ರೂ. ಲಂಚ ನೀಡುವಂತೆ ಎಸ್.ಗೋಪಿನಾಥ್ ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ರವಿಕುಮಾರ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
    ಶುಕ್ರವಾರ ಬುಕ್ಲಾಪುರ ಸ್ಮಶಾನದ ಬಳಿ ಸ್ಥಳ ಪರಿಶೀಲನೆಗಾಗಿ ಅಧಿಕಾರಿ ಎಸ್.ಗೋಪಿನಾಥ್ ಆಗಮಿಸಿದ್ದು, ಈ ವೇಳೆ ಸದರಿ ಗುತ್ತಿಗೆದಾರನಿಂದ 15 ಸಾವಿರ ರೂ. ಪಡೆದಿದ್ದರು. ಈ ವೇಳೆ ದಾಳಿ ನಡೆಸಿದ ಇನ್‌ಸ್ಪೆಕ್ಟರ್ ಎಚ್.ಎಸ್.ಸುರೇಶ್ ಮತ್ತು ಸಿಬ್ಬಂದಿ ಲಂಚದ ಹಣದ ಸಮೇತ ಅಧಿಕಾರಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
    ಲೋಕಾಯುಕ್ತ ಎಸ್ಪಿ ಎನ್. ವಾಸುದೇವರಾಮ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್, ಇನ್‌ಸ್ಪೆಕ್ಟರ್ ಪ್ರಕಾಶ್ ಇನ್‌ಸ್ಪೆಕ್ಟರ್ ಪ್ರಕಾಶ್ ಮತ್ತು ಸಿಬ್ಬಂದಿಗಳಾದ ಮಹಂತೇಶ, ಯೋಗೀಶ್, ಸುರೇಂದ್ರ, ಬಿ.ಟಿ.ಚನ್ನೇಶ, ಪ್ರಶಾಂತ್‌ಕುಮಾರ್, ಅರುಣ್‌ಕುಮಾರ್, ದೇವರಾಜ, ರಘುನಾಯ್ಕ, ಪುಟ್ಟಮ್ಮ, ತರುಣ್‌ಕುಮಾರ್, ಪ್ರದೀಪ್‌ಕುಮಾರ್, ಜಯಂತ್ ಕಾರ್ಯಾಚರಣೆ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts