More

    ಹೊಸ ಹೊಸ ಆವಿಷ್ಕಾರದ ಮೂಲಕ ಹೊಸ ಜೀವನಕ್ಕೆ ಕಾಲಿಡಿ; ಪ್ರಭುಲಿಂಗಪ್ಪ

    ರಾಣೆಬೆನ್ನೂರ: ಮನುಷ್ಯ ವಿಚಾರವಂತನಾಗಿರಬೇಕು. ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಹೊಸ ಜೀವನಕ್ಕೆ ಕಾಲಿಡಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಹೇಳಿದರು.
    ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ನಗರದ ಲಯನ್ಸ್ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಲಯನ್ಸ್ ಸಪ್ತಾಹ ಹಾಗೂ ಉಚಿತವಾಗಿ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
    ಡಾ. ಚಂದ್ರಶೇಖರ ಕೇಲಗಾರ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಪ್ರಮುಖರಾದ ಎಂ.ಎಸ್. ಅರಕೇರಿ, ಬಿ.ಎನ್. ಪಾಟೀಲ, ಎಲ್.ಜಿ. ಶೆಟ್ಟರ, ಕೆ.ಎಂ. ಬಸವರಾಜಯ್ಯ, ಗುತ್ತೆಪ್ಪ ಹಳೆಮನಿ, ಶಿವಪ್ಪ ಗುರಿಕಾರ, ಅಶೋಕ ಹೊಟ್ಟಿಗೌಡ್ರ, ಮಹೇಶ ಅಡಿವೆಪ್ಪನವರ, ಬಸವರಾಜ ಬಡಿಗೇರ, ಎಸ್.ಜಿ. ಮುಂಡರಗಿ, ಆರ್.ವಿ. ಸುರಗೊಂಡ, ಎಂ.ಎಚ್. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts