ರಾಯಬಾಗ: ಭಾರತೀಯ ಜೀವ ವಿಮಾ ನಿಗಮ ದೇಶದ ಅತ್ಯಂತ ಬಲಿಷ್ಠ ವಿಮೆ ಸಂಸ್ಥೆಯಾಗಿದ್ದು, ಇದು ಕೇಂದ್ರ ಸರ್ಕಾರಕ್ಕೆ ಸಾಲ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಎಲ್ಐಸಿ ರಾಯಬಾಗ ಉಪಶಾಖೆಯ ಅಧಿಕಾರಿ ಶಿವಪ್ರಕಾಶ ಹೇಳಿದ್ದಾರೆ.
ತಾಲೂಕಿನ ಭಿರಡಿ ಗ್ರಾಮವನ್ನು 3ನೇ ಬಾರಿ ವಿಮಾ ಗ್ರಾಮವೆಂದು ಘೋಷಣೆ ಮಾಡಿ ಎಲ್ಐಸಿ ವತಿಯಿಂದ ಅಭಿವೃದ್ಧಿಗಾಗಿ 1 ಲಕ್ಷ ರೂ.ಚೆಕ್ ಅನ್ನು ಗ್ರಾಪಂಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಬೆಳಗಾವಿ ಎಲ್ಐಸಿ ಅಭಿವೃದ್ಧಿ ಅಧಿಕಾರಿ ಎಂ.ಎನ್.ರಾಜೇಶ ಮಾತನಾಡಿ, ಗ್ರಾಮದ ಎಲ್ಐಸಿ ಪಾಲಿಸಿದಾರರ ಪ್ರೀಮಿಯಂನಿಂದ ಬರುವ ಲಾಭಾಂಶದ ಸ್ವಲ್ಪ ಮೊತ್ತವನ್ನು ಗ್ರಾಮದ ಅಭಿವೃದ್ಧಿಗಾಗಿ ನೀಡಲಾಗುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಮುರುಗೇಶ ನಿಶಾನದಾರ, ಪಿಡಿಒ ಸಂಗಮೇಶ ನ್ಯಾಮಗೌಡ, ಬಾಬಾಸಾಹೇಬ ಕುಂಬಾರ, ಕಲ್ಮೇಶ ನಿಡವಣಿ, ಅಶೋಕ ಮುತನಾಳ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ಸೂರ್ಯಕಾಂತ ಬೋರಗಾಂವೆ ಸ್ವಾಗತಿಸಿದರು. ಅಜಿತ ಶಿರಗಾಂವೆ ವಂದಿಸಿದರು.