More

    ಭಯೋತ್ಪಾದನೆ ಮುಕ್ತ ಭಾರತ ನಿರ್ಮಾಣ

    ಬಾಗಲಕೋಟೆ: ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದಿಂದ ನಸುಳಿ ಬರುತ್ತಿರುದ್ದ ಭಯೋತ್ಪಾದಕರಿಗೆ ಪ್ರಧಾನಿ ಮೋದಿ ತಕ್ಕ ಶಾಸ್ತಿ ಮಾಡಿದ್ದಾರೆ, ಮೋದಿ ಪ್ರಧಾನಿಯಾದರೆ ಭಯೋತ್ಪಾದನೆ ಮುಕ್ತ ಭಾರತ ನಿರ್ಮಾಣಗೊಳ್ಳುತ್ತದೆ, ದೇಶ ವಿಶ್ವದ 3 ನೇ ಆರ್ಥಿಕಶಕ್ತಿಯಾಗುತ್ತದೆ ಎಂದು ಡಾ.ವೀರಣ್ಣ ಚರಂತಿಮಠ ಹೇಳಿದರು.

    ಅವರು ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ನಗರದಲ್ಲಿ ಹಮ್ಮಿಕೊಂಡ ಚುನಾವಣಾ ಪಾದಯಾತ್ರೆಯಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.

    70 ವರ್ಷದಿಂದ ವೋಟ್‌ಬ್ಯಾಂಕಗಾಗಿ ಒಂದು ಕೋಮಿನ ಜನರನ್ನು ಓಲೈಕೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ರಾಜಕಾರಣವನ್ನು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಸಮಾಸ್ತಿಗೊಳಿಸಿದ್ದಾರೆ.


    ಪ್ರಧಾನಿ ಮೋದಿಯಿಂದ ಶಂಕುಷ್ಠಾಪನೆ ಮಾಡಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಟಾಪನೆಯನ್ನೂ ಮಾಡಲಾಯಿತು, ಕಾಶ್ಮೀರ ಮತ್ತು ಸಕ್ಸಲ್‌ವಾದ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಯಾಗುತ್ತಿದೆ, ಚಂದ್ರಯಾನ, ಮಂಗಳಯಾನ, ಆದಿತ್ಯಯಾನಗಳನ್ನು ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿ ನಡೆಸಿವೆ, ಮೋದಿಯಿಂದಾಗಿ ಭಾರವನ್ನು ಜಗತ್ತೆ ತಿರುಗಿ ನೋಡುತ್ತಿದೆ, ವಿಶ್ವದಲ್ಲಿ ಭಾರತದ ವರ್ಚಸ್ಸು ಇಮ್ಮಡಿಗೊಂಡಿದೆ, ಭಾರತದ ಸರ್ವಾಂಗಿಣ ಅಭಿವೃದ್ಧಿಗೆ ಮೋದಿ ಅವಶ್ಯವಾಗಿದ್ದು ಎಲ್ಲರೂ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಗೆ ಮತ ನೀಡುವ ಮೂಲಕ ಮೋದಿಯವರ ಕೈ ಬಲಪಡಿಸೋಣ ಎಂದರು.

    ನಗರದ ಹಳೆ ಪ್ರವಾಸಿಮಂದಿಂದ ಪ್ರಾರಂಭವಾದ ನಗರ ಪಾದಯಾತ್ರೆಯಲ್ಲಿ ಲಕ್ಷ್ಮೀ ನಾರಾಯಣ ಕಾಸಟ ಸಿ.ವ್ಹಿ.ಕೋಟಿ, ಕೇಶವ ಭಜಂತ್ರಿ, ಕುಮಾರ ಯಳ್ಳಿಗುತ್ತಿ, ನಗರಸಭೆ ಸದಸ್ಯ ಶ್ರೀಹರಿ ಟಿಕಾರಿ,ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ,ಸಲಿಂ ಮೋಮಿನ್ ವಿರೇಶ ಮಾಯಾಚಾರಿ, ರಾಜು ಗಾಣಗೇರ, ಬಸವರಾಜ ಹುನಗುಂದ,ಉಮೇಶ ಹಂಚಿನಾಳ ಸೇರಿದಮತೆ ಅನೇಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts