More

    ಮಹಿಳೆಗೆ ವಂಚಿಸಿದವರ ಬಂಧನವಾಗಲಿ

    ಬೆಳಗಾವಿ: ಜಮೀನು ಖರೀದಿ ವಿಚಾರವಾಗಿ ರಾಯಬಾಗ ತಾಲೂಕಿನ ಚಿಂಚಲಿಯಲ್ಲಿ ಮಹಿಳೆಯೊಬ್ಬರಿಗೆ 80 ಲಕ್ಷ ರೂ. ನೀಡದೆ ವಂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಸುವರ್ಣ ಗಾರ್ಡನ್ ಬಳಿ ಶುಕ್ರವಾರ ಪ್ರತಿಭಟಿಸಿದರು.

    ಶೋಭಾ ಮಾನೆ ಅವರ 5 ಎಕರೆ, 21 ಗುಂಟೆ ಜಮೀನನ್ನು ರಾಜು ಬನಗೆ ಎಂಬುವರು 85 ಲಕ್ಷಕ್ಕೆ ಖರೀದಿಸಿದ್ದರು. ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೂ ಮಹಿಳೆ ಹೆಸರಿನಲ್ಲಿ ಕೋ-ಆಪರೇಟಿವ್ ಸೊಸೈಟಿಯಲ್ಲಿ ಮತ್ತೊಂದು ಖಾತೆ ತೆರೆದಿದ್ದಾರೆ. ಕೇವಲ 5 ಲಕ್ಷ ರೂ. ಕೊಟ್ಟಿದ್ದು, ಉಳಿದ 80 ಲಕ್ಷ ರೂ. ಬೇರೊಬ್ಬರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಹಾಗಾಗಿ ಮಹಿಳೆಗೆ ವಂಚಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ನಾಗೇಶ ಕಾಮಶೆಟ್ಟಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts